ಕಲಬುರ್ಗಿ: ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಶರಣಸಿರಸಗಿ ಗ್ರಾಮದಲ್ಲಿ ನಡೆದಿದೆ.
ಜಯಶ್ರೀ(35), ಪವಿತ್ರಾ(12), ಸುನಿಲ್(10), ಅನಿಲ್(6) ಮೃತಪಟ್ಟವರು.
ಭಾನುವಾರ ರಾತ್ರಿಯೇ ಜಯಶ್ರೀ ಭಾವಿಗೆ ಹಾರಿದ್ದಾರೆ. ತಡರಾತ್ರಿ ಆಕೆಯ ಶವ ಹೊರ ತೆಗೆಯಲಾಯಿತು. ಸೋಮವಾರ ಬೆಳಿಗ್ಗೆ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಾಚರಣೆ ನಡೆಸಿ ಉಳಿದವರ ಮೃತದೇಹ ಹೊರತೆಗೆದರು.
ಯಂತ್ರಗಳ ಮೂಲಕ ಬಾವಿಯ ನೀರು ಹೊರತೆಗೆದು ಶವ ಮೇಲೆತ್ತಲಾಯಿತು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.
ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.