ADVERTISEMENT

ಪಿಯು: ಬದಲಿ ವಿದ್ಯಾರ್ಥಿ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:37 IST
Last Updated 12 ಮಾರ್ಚ್ 2014, 19:37 IST

ಕೃಷ್ಣರಾಜಪೇಟೆ: ಬೇರೊಬ್ಬರ ಹೆಸರಿ­ನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆಯು­ತ್ತಿದ್ದ ಅಭ್ಯರ್ಥಿಯೊಬ್ಬ ಪರೀಕ್ಷಾ ಜಾಗೃತ ದಳದವರ ಕೈಗೆ ಸಿಕ್ಕಿಬಿದ್ದ ಘಟನೆ ಪಟ್ಟಣದ ಎಸ್‌.ಎಂ. ಲಿಂಗಪ್ಪ ಶಿಕ್ಷಣ ವಿದ್ಯಾಲ­ಯದ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆದಿದೆ. ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಆಸಿಫ್‌ (19) ಸಿಕ್ಕಿಬಿದ್ದ ವ್ಯಕ್ತಿ. 

ಆಲಂಬಾಡಿ ಗ್ರಾಮದ ಸೋಮ­ಶೇಖರ್‌ ಎಂಬುವವನ ಬದಲಾಗಿ ಆಸಿಫ್‌ ಬುಧವಾರ ರಾಜ್ಯಶಾಸ್ತ್ರ ಪತ್ರಿ­ಕೆಯ ಪರೀಕ್ಷೆ ಬರೆಯುತ್ತಿದ್ದ.
ಜಾಗೃತ ದಳದ ಅಧಿಕಾರಿಗಳ ತಂಡವು ಪ್ರವೇಶ ಪತ್ರ­ದಲ್ಲಿನ ಅಭ್ಯರ್ಥಿಯ ಭಾವ­ಚಿತ್ರ­ವನ್ನು ಪರಿ­ಶೀಲನೆ ಮಾಡುವ ಸಂದರ್ಭ­ದಲ್ಲಿ ನಕಲಿ ಅಭ್ಯರ್ಥಿಯನ್ನು ಪತ್ತೆ ಹಚ್ಚಿ­ದರು. ಆಸಿಫ್‌­ನನ್ನು ಪೋಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.