ADVERTISEMENT

ಪ್ರಜಾವಾಣಿಗೆ 70: 17ಕ್ಕೆ ಸಂವಾದ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 12:23 IST
Last Updated 16 ಅಕ್ಟೋಬರ್ 2018, 12:23 IST
1961ರ ಜೂನ್ 12ರಂದು ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಮುದ್ರಣಾಲಯಕ್ಕೆ ಅಂದಿನ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಬಿ.ಎನ್‌. ದಾತಾರ್‌ ಭೇಟಿ ನೀಡಿದ ಅಪರೂಪದ ಕ್ಷಣ. ಸಂಸ್ಥಾಪಕರಾದ ಕೆ.ಎನ್‌. ಗುರುಸ್ವಾಮಿ, ಕೆ.ಎನ್‌. ವೆಂಕಟಸ್ವಾಮಿ ಚಿತ್ರದಲ್ಲಿದ್ದಾರೆ. ಚಿತ್ರಗಳು: ಪ್ರಜಾವಾಣಿ ಆರ್ಕೈವ್
1961ರ ಜೂನ್ 12ರಂದು ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಮುದ್ರಣಾಲಯಕ್ಕೆ ಅಂದಿನ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಬಿ.ಎನ್‌. ದಾತಾರ್‌ ಭೇಟಿ ನೀಡಿದ ಅಪರೂಪದ ಕ್ಷಣ. ಸಂಸ್ಥಾಪಕರಾದ ಕೆ.ಎನ್‌. ಗುರುಸ್ವಾಮಿ, ಕೆ.ಎನ್‌. ವೆಂಕಟಸ್ವಾಮಿ ಚಿತ್ರದಲ್ಲಿದ್ದಾರೆ. ಚಿತ್ರಗಳು: ಪ್ರಜಾವಾಣಿ ಆರ್ಕೈವ್   

ಮಂಡ್ಯ: ಪ್ರಜಾವಾಣಿ ದಿನಪತ್ರಿಕೆಗೆ 70 ವಸಂತ ತುಂಬಿದ ಹಿನ್ನೆಲೆಯಲ್ಲಿ ಮಂಗಲ ಗ್ರಾಮದ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ನಗರದ ಕೆ.ವಿ.ಶಂಕರಗೌಡ ಬಿ.ಇಡಿ ಕಾಲೇಜು ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 10.30ಕ್ಕೆ ‘ಪ್ರಜಾವಾಣಿಗೆ 70: ಒಂದು ಸಂವಾದ’ ಆರ್ಯಕ್ರಮ ಆಯೋಜಿಸಿದೆ.

ಹಿರಿಯ ಚಿಂತಕ ಪ್ರೊ.ಎಂ.ಕರೀಮುದ್ದೀನ್‌ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು. ಕೆ.ವಿ.ಶಂಕರಗೌಡ ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ.ಚನ್ನಕೃಷ್ಣಯ್ಯ ಅಧ್ಯಕ್ಷತೆ ವಹಿಸುವರು. ಪ್ರಜಾವಾಣಿ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ಜೆ.ಮರಿಯಪ್ಪ ಅತಿಥಿಯಾಗಿ ಭಾಗವಹಿಸುವರು. ವಿಜಯ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಸತ್ಯನಾರಾಯಣ ನಾಯಕ, ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ, ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌, ಕವಿ ಕೆ.ಪಿ.ಮೃತ್ಯುಂಜಯ, ಜನವಾದಿ ಮಹಿಳಾ ಸಂಘಟನೆಯ ಸಿ.ಕುಮಾರಿ ಅಭಿಪ್ರಾಯ ಮಂಡಿಸುವರು.

ಬಿ.ಇಡಿ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರಜಾವಾಣಿ ನಡೆದು ಬಂದ ಹಾದಿಯ ಬಗ್ಗೆ ಸಂವಾದ ನಡೆಸಲಿದ್ದಾರೆ ಎಂದು ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್‌, ಕಾರ್ಯದರ್ಶಿ ಡಿ.ನಂಜುಂಡಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.