ಬೆಂಗಳೂರು: ಶಿವಮೊಗ್ಗ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ಕರ್ನಾಟಕ ಯೇಸುಸಭೆಯ ಮುಖ್ಯಸ್ಥ ಫ್ರಾನ್ಸಿಸ್ ಸೆರಾವೋ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಬುಧವಾರ ನೇಮಕ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಫ್ರಾನ್ಸಿಸ್ ಸೆರಾವೋ ಅವರು 1922ರ ಏಪ್ರಿಲ್ 30ರಂದು ಮಂಗಳೂರಿನ ಧರ್ಮಾಧ್ಯಕ್ಷರಾಗಿದ್ದ ಬೇಸಿಲ್ ಡಿಸೋಜಾ ಅವರಿಂದ ಗುರುದೀಕ್ಷೆ ಸ್ವೀಕರಿಸಿದ್ದರು. ಬಳಿಕ ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಧರ್ಮಕೇಂದ್ರದಲ್ಲಿ ಧರ್ಮಗುರುವಾಗಿದ್ದರು.
ಆ ನಂತರ ಆನೇಕಲ್ನ ಸಂತ ಜೋಸೆಫರ ಧರ್ಮಕೇಂದ್ರದ ಧರ್ಮಗುರುಗಳಾಗಿ, ಯೇಸುಸಭೆಯ ಪ್ರಾಂತೀಯ ದೈವಶಾಸ್ತ್ರ ಕೇಂದ್ರದ ಮೇಲ್ವಿಚಾರಕರಾಗಿದ್ದರು. 2004ರಿಂದ 2009ರವರೆಗೆ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ರೆಕ್ಟೆರ್ ಆಗಿ ಸೇವೆ ಸಲ್ಲಿಸಿದ್ದಾರೆ. 2009ರಿಂದ ಕರ್ನಾಟಕ ಯೇಸುಸಭೆಯ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.