ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ಉತ್ತರ ಭಾರತ ಪ್ರವಾಸಕ್ಕೆಂದು ತೆರಳಿದ್ದ ಬನಹಟ್ಟಿಯ ಮಾಹೇಶ್ವರಿ ಸಮಾಜದ ಐವರು ಮತ್ತು ಅವರ ಸಂಬಂಧಿಕರು ಹಾಗೂ ಪ್ರಭು ಕರಲಟ್ಟಿ ದಂಪತಿ ಸೇರಿದಂತೆ ಒಟ್ಟು 17 ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಲಡ್ಡಾ ಕುಟುಂಬ ಹಾಗೂ ಪ್ರಭು ಕರಲಟ್ಟಿ ಕುಟುಂಬದ ಸದಸ್ಯರು ಜೂನ್ 15 ರಂದು ದೆಹಲಿಯಿಂದ ಉತ್ತರಾಖಂಡದ ಬದರಿನಾಥ ಮತ್ತು ಯಮುನೋತ್ರಿ ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದಂತೆ ಮಾರ್ಗ ಮಧ್ಯದಲ್ಲಿ ಪ್ರವಾಹದಿಂದಾಗಿ ರಸ್ತೆ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಬದರಿನಾಥದಿಂದ ಸುಮಾರು 20 ಕಿ.ಮೀ. ದೂರದ ಪಾಂಡೇಶ್ವರ ಎಂಬ ಪ್ರದೇಶದಲ್ಲಿ ನಂದಲಾಲ ಲಡ್ಡಾ ಮತ್ತು ಅವರ ಕುಟುಂಬದ ಏಳು ಸದಸ್ಯರು, ಪ್ರಭು ಕರಲಟ್ಟಿ ಕುಟುಂಬದ ಮೂವರು ಸದಸ್ಯರು ಉತ್ತರ ಕಾಶಿಯಲ್ಲಿ ಹಾಗೂ ಯಮುನೋತ್ರಿಯಲ್ಲಿ ಭಗವಾನದಾಸ ಲಡ್ಡಾ ಕುಟುಂಬದ ಸದಸ್ಯರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.