ADVERTISEMENT

ಮಂತ್ರಾಲಯ: ಸುವರ್ಣ ಲೇಪಿತ ಗೋಪುರ ಕಳಶಾಭಿಷೇಕ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 19:30 IST
Last Updated 13 ಆಗಸ್ಟ್ 2016, 19:30 IST
ಮಂತ್ರಾಲಯದಲ್ಲಿ ಸುವರ್ಣ ಲೇಪಿತ 45 ಅಡಿ ಎತ್ತರದ ಗೋಪುರಕ್ಕೆ ಸುಬುಧೇಂದ್ರ ತೀರ್ಥರು ಶನಿವಾರ ಕಳಶಾಭಿಷೇಕ ನೆರವೇರಿಸಿದರು
ಮಂತ್ರಾಲಯದಲ್ಲಿ ಸುವರ್ಣ ಲೇಪಿತ 45 ಅಡಿ ಎತ್ತರದ ಗೋಪುರಕ್ಕೆ ಸುಬುಧೇಂದ್ರ ತೀರ್ಥರು ಶನಿವಾರ ಕಳಶಾಭಿಷೇಕ ನೆರವೇರಿಸಿದರು   

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ 45 ಅಡಿ ಎತ್ತರದ ಸುವರ್ಣ ಲೇಪಿತ ಗೋಪುರದ ಕಳಶಾಭಿಷೇಕವನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶನಿವಾರ ನೆರವೇರಿಸಿದರು.

ಗುರುರಾಯರ ಮೂಲ ವೃಂದಾವನ ಮತ್ತು ವಾದೀಂದ್ರ ತೀರ್ಥರ ವೃಂದಾವನದ ನಡುವೆ ಇರುವ ಹಳೆಯ ಗೋಪುರವನ್ನು ಜೀರ್ಣೋದ್ಧಾರ ಮಾಡಿ ಎತ್ತರ ಹೆಚ್ಚಿಸಲಾಗಿದೆ. ಬಹುಕೋಟಿ ವೆಚ್ಚದಲ್ಲಿ ಸುವರ್ಣ ಲೇಪನ ಕೈಗೊಳ್ಳಲಾಗಿದೆ.

ಕಳಶಾಭಿಷೇಕಕ್ಕೂ ಮುನ್ನ ರಾಘವೇಂದ್ರರ ಮೂಲವೃಂದಾವನದ ಪ್ರಾಕಾರದಲ್ಲಿ ಸುಮಾರು ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಿಲಾಮಂಟಪದ ಉದ್ಘಾಟನೆ ನಡೆಯಿತು. ಬೆಳಿಗ್ಗೆ 10.35ರ ಶುಭ ಮುಹೂರ್ತದಲ್ಲಿ ಗೋವು–ಕರು, ಮೂಲ ರಾಮದೇವರ ಮೂರ್ತಿ, ಸ್ವಾಮೀಜಿ ಅವರು ಶಿಲಾಮಂಟಪವನ್ನು ಪ್ರವೇಶ ಮಾಡಿದರು. ಇದರ ಅಂಗವಾಗಿ ವಾಸ್ತು ಹೋಮ ಸೇರಿದಂತೆ ಅನೇಕ ಹೋಮಗಳು, ಚತುರ್ವೇದ ಪಾರಾಯಣ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.