ADVERTISEMENT

ಮೋದಿಯವರೇ ರೆಡ್ಡಿ ಸಹೋದರರ ಪ್ರಚಾರದ ನೈತಿಕತೆ ಬಗ್ಗೆ ಮಾತನಾಡಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಮೇ 2018, 5:41 IST
Last Updated 5 ಮೇ 2018, 5:41 IST
ಮೋದಿಯವರೇ ರೆಡ್ಡಿ ಸಹೋದರರ ಪ್ರಚಾರದ ನೈತಿಕತೆ ಬಗ್ಗೆ ಮಾತನಾಡಿ: ಸಿದ್ದರಾಮಯ್ಯ
ಮೋದಿಯವರೇ ರೆಡ್ಡಿ ಸಹೋದರರ ಪ್ರಚಾರದ ನೈತಿಕತೆ ಬಗ್ಗೆ ಮಾತನಾಡಿ: ಸಿದ್ದರಾಮಯ್ಯ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳುವ ಮೂಲಕ ಕಾಲೆಳೆದಿದ್ದಾರೆ.

‘ಪ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರವನ್ನು ಚುನಾವಣಾ ವಿಷಯವಾಗಿಸಿರುವುದಕ್ಕೆ ನನಗೆ ಸಂತೋಷವಿದೆ. ಅದು ನಿಮ್ಮದೇ ಪಕ್ಷದ ದುರ್ಬಲ ಅಂಶ(ವೀಕ್‌ ಪಾಯಿಂಟ್‌)ಆಗಿದೆ’

‘ನಮ್ಮ ಸರ್ಕಾರದ ವಿರುದ್ಧ ಆಧಾರರಹಿತವಾದ ಭ್ರಷ್ಟಾಚಾರದ ಆರೋಪಗಳನ್ನು ನೀವು ಮಾಡುತ್ತಿದ್ದೀರಾ’.

ADVERTISEMENT

‘ಚುನಾವಣೆ ಗೆಲ್ಲಲು ರೆಡ್ಡಿ ಸಹೋದರರನ್ನು ನೀವು ಬಳಸಿಕೊಳ್ಳುತ್ತಿರುವ ನೈತಿಕತೆಯ ಕುರಿತು ಐದು ನಿಮಿಷ ಮಾತನಾಡಬಲ್ಲಿರಾ?’ ಎಂದು ಕುಟುಕಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.