ADVERTISEMENT

ರಾಮನಗರ ತಾಲ್ಲೂಕಿನ ವಿಭೂತಿಕೆರೆ ಬಳಿ ಅಪಘಾತ: ಬಾಲಕ‌ ಸೇರಿ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 12:43 IST
Last Updated 15 ಏಪ್ರಿಲ್ 2018, 12:43 IST
ರಾಮನಗರ ತಾಲ್ಲೂಕಿನ ವಿಭೂತಿಕೆರೆ ಬಳಿ ಅಪಘಾತ: ಬಾಲಕ‌ ಸೇರಿ ಇಬ್ಬರು ಸಾವು
ರಾಮನಗರ ತಾಲ್ಲೂಕಿನ ವಿಭೂತಿಕೆರೆ ಬಳಿ ಅಪಘಾತ: ಬಾಲಕ‌ ಸೇರಿ ಇಬ್ಬರು ಸಾವು   

ರಾಮನಗರ: ತಾಲ್ಲೂಕಿನ ವಿಭೂತಿಕೆರೆ ಗ್ರಾಮದ ಬಳಿ ಭಾನುವಾರ ಟ್ರ್ಯಾಕ್ಟರ್‌ ಹಾಗೂ  ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.‌

ಬನ್ನಿಕುಪ್ಪೆ ಗ್ರಾಮದ ಸ್ವರೂಪ್(18) ಶ್ರೇಯಸ್(10) ಮೃತರು. ಈ ಇಬ್ಬರು ಬನ್ನಿಕುಪ್ಪೆಯಿಂದ ರಾಮನಗರದ ಕಡೆಗೆ ಬೈಕಿನಲ್ಲಿ‌ ಹೊರಟಿದ್ದರು. ಈ ವೇಳೆ‌ ವಿಭೂತಿಕೆರೆ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ  ಟ್ರ್ಯಾಕ್ಟರ್ ನಡುವೆ ಡಿಕ್ಕಿ‌ ಸಂಭವಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶವಗಳನ್ನು ರಾಮನಗರದ ಜಿಲ್ಲಾ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಲಾಯಿತು.‌ ರಾಮನಗರ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.