ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಪಟ್ಟಣದ ಎಪಿಎಂಸಿ ಬಳಿ ವಾಹನ ಚಲಾಯಿಸುತ್ತಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ.
ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ವ್ಯಕ್ತಿ ಟಾಟಾ ಏಸ್ ವಾಹನವನ್ನು ಓಡಿಸುತ್ತಿದ್ದರು. ಈ ವೇಳೆವಾಹನದಲ್ಲಿ ತಂದೆ ಪಕ್ಕದಲ್ಲೇ ಕುಳತಿದ್ದ 8 ವರ್ಷದ ಮಗ ತಂದೆಯ ಅಸ್ವಸ್ಥ ಸ್ಥಿತಿ ಕಂಡು, ಸ್ಟೇರಿಂಗ್ ಹಿಡಿದು ವಾಹನವನ್ನು ರಸ್ತೆ ಪಕ್ಕದ ದಿಣ್ಣೆಯ ಕಡೆ ತಿರುಗಿಸಿ ಅಪಾಯ ತಪ್ಪಿಸಿದ್ದಾನೆ. ಸಾರ್ವಜನಿಕರು ಚಾಲಕನನ್ನು ಆಸ್ಪತ್ರೆಗೆ ಸೇರಿದ್ದಾರೆ.
ವಾಹನದಲ್ಲಿ ಮಿಕ್ಸಿಗಳನ್ನು ಸಾಗಿಸಲಾಗುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.