ಮೈಸೂರು: ‘ವಿಮರ್ಶಕರು ಕೊಲೆಗಡುಕರು’ ಎಂದು ಕವಿ ದೊಡ್ಡರಂಗೇಗೌಡ ಟೀಕಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅವರಿಗೆ ಹೇಮಗಂಗಾ ಕಾವ್ಯ ಬಳಗ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ ಮಾತನಾಡಿದರು.
‘ವಿಮರ್ಶಕರು ಪಕ್ಷಪಾತಿಗಳಾಗಿದ್ದಾರೆ. ದೊಡ್ಡರಂಗೇಗೌಡ ಎಂಬ ಹೆಸರಿನಲ್ಲಿಯೇ ಗೌಡ ಎಂದಿದೆ. ಇವನನ್ನು ಮಟ್ಟಹಾಕಬೇಕು ಎನ್ನುವ ಮಟ್ಟಕ್ಕೆ ವಿಮರ್ಶೆ ಇಳಿದಿದೆ. ಇಂಥವರು ಗೋಡೆ ಹಾಗೂ ಕಬ್ಬಿಣದ ಸರಳುಗಳನ್ನು ನಿರ್ಮಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ನಾನು ಚಲನಚಿತ್ರ ಸಾಹಿತ್ಯ ರಚನೆಗೆ ತೊಡಗಿಕೊಂಡಾಗ, ಅನೇಕ ವಿಮರ್ಶಕರು ಕವಿಯಾದ ನಾನು ಸತ್ತೇ ಹೋದ ಎಂದು ಬರೆದಿದ್ದರು. ಅವುಗಳನ್ನು ಓದಿದವರಿಗೆ ನನ್ನ ಸಾಹಿತ್ಯ ರಚನೆಯ ಯಾವುದೇ ಚಲನಚಿತ್ರಗಳನ್ನು ನೋಡಬಾರದು ಎನಿಸುವಂತಿದ್ದವು. ಆದರೆ, ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ‘ತೇರಾನೇರಿ ಅಂಬರದಾಗೆ ನೇಸರ ನಗುತಾನೆ’ ಹಾಡು ಪ್ರೇಕ್ಷರನ್ನು ಸೆಳೆದಿತ್ತು’ ಎಂದು ಹೇಳಿದರು.
ನಮ್ಮ ನಡೆ ಕನ್ನಡದ ತಾಯಿ, ತಾಯಿ ಭಾರತಿ, ಮಣ್ಣಿನ ವಾಸನೆ, ಗ್ರಾಮೀಣ ಬದುಕಿನ ಕಡೆಗೆ ಇರಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.