ಕುಂದಾಪುರ: ನಗರದ ಎಂ.ಕೋಡಿಯ ಮನೆಯೊಂದರ ಶೌಚಾಲಯ ಹೊಂಡ ಸ್ವಚ್ಛಗೊಳಿಸಲು ಬಂದಿದ್ದ ತೆಕ್ಕಟ್ಟೆಯ ಸಂದೀಪ್ (32) ಎಂಬುವರು ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಶನಿವಾರ ಮೃತಪಟ್ಟಿದ್ದಾರೆ.
ಎಂ.ಕೋಡಿ ಅಬ್ದುಲ್ ಖಾದರ್ ಜಿಲಾನಿ ಎಂಬುವರ ಮನೆಯ ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ ಕಾರ್ಮಿಕರನ್ನು ಹುಡುಕುತ್ತಿದ್ದ ವೇಳೆ ಮನೆಗೆ ಕೆಲಸ ಕೇಳಿ ಬಂದಿದ್ದ ಸಂದೀಪ್ ಹಾಗೂ ವಾಸು ಎಂಬುವವರಿಗೆ ಶೌಚಾಲಯ ಶುಚಿಗೊಳಿಸುವ ಕೆಲಸ ವಹಿಸಲಾಗಿತ್ತು ಈ ವೇಳೆ ಸಂದೀಪ್ ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದು ಉಸಿರು ಕಟ್ಟಿ ಅಸ್ವಸ್ಥಗೊಂಡರು. ಸ್ಥಳೀಯರ ಸಹಕಾರದಿಂದ ಅವರನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಅದು ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ.
ಡಿವೈಎಸ್ಪಿ ಬಿ.ಪಿ.ದಿನೇಶ್ಕುಮಾರ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.