ADVERTISEMENT

ಸಣ್ಣ ಕೆರೆಗಳ ನಿರ್ಮಾತೃ ಕಾಮೇಗೌಡರಿಗೆ 'ಬಸವಶ್ರೀ' ಪ್ರಶಸ್ತಿ ಪ್ರದಾನ​

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 7:01 IST
Last Updated 15 ಏಪ್ರಿಲ್ 2018, 7:01 IST
ಸಣ್ಣ ಕೆರೆಗಳ ನಿರ್ಮಾತೃ ಕಾಮೇಗೌಡರಿಗೆ 'ಬಸವಶ್ರೀ' ಪ್ರಶಸ್ತಿ ಪ್ರದಾನ​
ಸಣ್ಣ ಕೆರೆಗಳ ನಿರ್ಮಾತೃ ಕಾಮೇಗೌಡರಿಗೆ 'ಬಸವಶ್ರೀ' ಪ್ರಶಸ್ತಿ ಪ್ರದಾನ​   

ಚಿತ್ರದುರ್ಗ: ಇಲ್ಲಿನ ಬಸವ ಕೇಂದ್ರ ಮುರುಘಾ ಮಠದಿಂದ ನೀಡುವ 2017ನೇ ಸಾಲಿನ ಪ್ರತಿಷ್ಠಿತ ’ಬಸವಶ್ರೀ ಪ್ರಶಸ್ತಿ’ ಯನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ನಿಸರ್ಗ ಪ್ರೇಮಿ ಹಾಗೂ ಸಣ್ಣ ಕೆರೆಗಳ(ಚೆಕ್ ಡ್ಯಾಂ) ನಿರ್ಮಾತೃ ಕಾಮೇಗೌಡ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.

ಮುರುಘಾ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪ್ರಶಸ್ತಿಯು ₹ 5 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ADVERTISEMENT

ಸಮಾರಂಭದಲ್ಲಿ ಪ್ರಗತಿಪರ ರೈತ ಡಾ.ಮಲ್ಲಣ್ಣ ಶಂಕ್ರಪ್ಪ ನಾಗರಾಳ, ವಿವಿಧ ಮಠಾಧೀಶರು, ಗಣ್ಯರು ಇದ್ದರು.
ಇದನ್ನೂ ಓದಿರಿ..
ಕುರಿ ಮಾರಿ ಕೆರೆ ಕಟ್ಟಿದರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.