ADVERTISEMENT

ಸುಶೀಲಾ ಡೋಣೂರಗೆ ತ್ರಿವೇಣಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ಬೆಂಗಳೂರು:ಕರ್ನಾಟಕ ಲೇಖಕಿಯರ ಸಂಘವು ಉದಯೋನ್ಮುಖ ಲೇಖಕಿಯ­ರಿಗೆ ತ್ರಿವೇಣಿ ಅವರ ಹೆಸರಿನಲ್ಲಿ ನೀಡುವ ಪ್ರಥಮ ಪ್ರಶಸ್ತಿಗೆ ಈ ಬಾರಿ, ‘ಪ್ರಜಾ­ವಾಣಿ’ಯ ಉಪ ಸಂಪಾದಕಿ ಸುಶೀಲಾ ಡೋಣೂರ ಅವರ ‘ನ್ಯಾನ್ಸಿ’ ಕಾದಂಬರಿ ಆಯ್ಕೆಯಾಗಿದೆ.

ತ್ರಿವೇಣಿ­ಯ­ವರ ಹೆಸರಿ­ನಲ್ಲಿ ಅವರ ಕುಟುಂಬ­ದವರು ಇರಿಸಿ­ರುವ ದತ್ತಿ ನಿಧಿಯಿಂದ ಪ್ರಶಸ್ತಿ ನೀಡಲಾ­ಗುತ್ತಿದೆ. ಭುವನಾ ಸುರೇಶ್‌ ಅವರ ‘ಸಖಿ ಯಾರೇ ನಿನ್ನವನು?’ ಮತ್ತು ಎಸ್‌.ಜಿ. ಮಾಲತಿ ಶೆಟ್ಟಿ ಅವರ ‘ಶೋಕವನದಿ ಸೀತೆ’ ಕಾದಂಬರಿಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಬಹು­ಮಾ­ನಕ್ಕೆ ಆಯ್ಕೆ­­ಯಾ­­ಗಿವೆ ಎಂದು ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ತಿಳಿಸಿ­ದ್ದಾರೆ.

ಪ್ರಥಮ ಪ್ರಶಸ್ತಿ ₨5,000, ದ್ವಿತೀಯ ಪ್ರಶಸ್ತಿ ₨ 3,000 ಮತ್ತು ತೃತೀಯು ಪ್ರಶಸ್ತಿ ₨ 2,000 ನಗದನ್ನು ಒಳಗೊಂಡಿದೆ. ಇದೇ 12ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿ­ರುವ ಕಾರ್ಯಕ್ರಮದಲ್ಲಿ ಸಾಹಿತಿ ಶೂದ್ರ ಶ್ರೀನಿವಾಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.