ADVERTISEMENT

‘ಪ್ರಜಾವಾಣಿ’ ಟ್ರೈನಿ ಉಪಸಂಪಾದಕ ಗಣೇಶ ವೈದ್ಯಗೆ 6 ಚಿನ್ನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 19:30 IST
Last Updated 25 ಮಾರ್ಚ್ 2014, 19:30 IST
ಗಣೇಶ ವೈದ್ಯ
ಗಣೇಶ ವೈದ್ಯ   

ಧಾರವಾಡ: ‘ಪ್ರಜಾವಾಣಿ’ಯ ಬೆಂಗ­ಳೂರು ಕಚೇರಿಯಲ್ಲಿ ಟ್ರೈನಿ ಉಪ ಸಂಪಾ­ದ­ಕ­ರಾಗಿ ಕೆಲಸ ಮಾಡುತ್ತಿ­ರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವೈದ್ಯ­ಹೆಗ್ಗಾರ ಗ್ರಾಮದ ಗಣೇಶ ಶಿವರಾಮ ವೈದ್ಯ ಅವರಿಗೆ ಕರ್ನಾಟಕ ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋ­ದ್ಯಮ ವಿಭಾಗದ ಆರು ಚಿನ್ನದ ಪದಕಗಳು ಲಭಿಸಿವೆ.

ಮಂಗಳವಾರ ನಡೆದ ವಿ.ವಿ. ಘಟಿಕೋತ್ಸ­ವದಲ್ಲಿ ಪದಕಗಳನ್ನು ಕುಲ­ಪತಿ ಪ್ರೊ.ಎಚ್‌.ಬಿ.ವಾಲೀಕಾರ ಪ್ರದಾನ ಮಾಡಿದರು.

‘ಪ್ರಜಾವಾಣಿಯಂತಹ ಪ್ರತಿಷ್ಠಿತ ಪತ್ರಿಕೆ­ಯಲ್ಲಿ ಕೆಲಸ ಮಾಡುತ್ತಿರುವುದು ನನ್ನ ಸೌಭಾಗ್ಯ. ಇದೇ ವೃತ್ತಿಯಲ್ಲಿ ಮುಂದುವರಿಯುತ್ತೇನೆ’ ಎಂದು ವೈದ್ಯ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.