ADVERTISEMENT

ಕುರಿಗಾಹಿಯ ಕುಡುಗೋಲು ತಗುಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 9:31 IST
Last Updated 12 ಏಪ್ರಿಲ್ 2019, 9:31 IST
   

ಕಲಬುರ್ಗಿ: ನಗರದ ರಾಮಮಂದಿರ ಬಳಿಯ ರಿಂಗ್ ರಸ್ತೆಯಲ್ಲಿ ಕುರಿಗಾಹಿಯೊಬ್ಬರ ಹರಿತವಾದ ಕುಡುಗೋಲು ಕುತ್ತಿಗೆಗೆ ತಗುಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಮೇಘನಾ ನೀಲಕಂಠ ಹಿರೇಗೌಡರ (20) ಮೃತಪಟ್ಟವರು.

ಕುರಿಗಾಹಿಯು ಸೈಕಲ್ ಮೇಲೆ ಕುಡುಗೋಲು ಇಟ್ಟುಕೊಂಡು ಬರುತ್ತಿದ್ದ ಮಾರ್ಗದಲ್ಲೆಮೃತ ವಿದ್ಯಾರ್ಥಿನಿಕಾಲೇಜಿಗೆ ತೆರಳುತ್ತಿದ್ದರು.ಈ ವೇಳೆಕುರಿಗಾಯಿಯುಮಾರ್ಗ ಬದಲಿಸಲು ಎಡಕ್ಕೆ ಚಲಿಸಿದ್ದಾರೆ. ಹಿಂದೆ ಬರುತ್ತಿದ್ದ ವಿದ್ಯಾರ್ಥಿನಿ ತಕ್ಷಣ ಸ್ಕೂಟರ್‌ ನಿಲ್ಲಿಸಲು ಪ್ರಯತ್ನಿಸಿದ್ದಾರಾದರೂ ಸ್ಕಿಡ್‌ ಆಗಿದೆ.

ADVERTISEMENT

ಹೀಗಾಗಿ ಕುಡುಗೋಲು ನೇರವಾಗಿ ವಿದ್ಯಾರ್ಥಿನಿಯಕುತ್ತಿಗೆಗೆ ತಗುಲಿ,ತೀವ್ರ ರಕ್ತಸ್ರಾವವಾಗಿದೆ.ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸುವಮಾರ್ಗದಲ್ಲಿಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕಕುರಿಗಾಹಿ ಸೈಕಲ್ ಬಿಟ್ಟು ಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.