ನವದೆಹಲಿ: ಕರ್ನಾಟಕಕ್ಕೆ ಇಂದು ಹೆಚ್ಚುವರಿಯಾಗಿ 9,400 ವಯಲ್ಸ್ ಲಿಪೊಸೊಮಲ್ ಆ್ಯಂಪೊಟೆರಿಸಿನ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೋಮವಾರ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಹಂಚಿಕೆಯಾಗಿರುವ 9,400 ವಯಲ್ಸ್ ಸೇರಿ ಈವರೆಗೆ ರಾಜ್ಯಕ್ಕೆ ಒಟ್ಟು 49,870 ಬಾಟಲುಗಳನ್ನು ರಾಜ್ಯಕ್ಕೆ ನೀಡಲಾಗಿದೆ.
ಇದಲ್ಲದೆ, ಕನ್ವೆನ್ಷನಲ್ ಆಂಫೊಟೆರಿಸಿನ್ ಬಿ ಯ 4,680 ಬಾಟಲುಗಳನ್ನು ಸಹ ಇಂದು ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೂಗು, ಕಣ್ಣು, ಕೆಲವೊಮ್ಮೆ ಮೆದುಳಿಗೆ ಹಾನಿ ಮಾಡುವ ಮ್ಯೂಕರ್ಮೈಕೊಸಿಸ್ (ಕಪ್ಪು ಶಿಲೀಂಧ್ರ) ಚಿಕಿತ್ಸೆಗೆ ಆ್ಯಂಪೊಟೆರಿಸಿನ್ ಬಳಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.