ADVERTISEMENT

ಕರ್ನಾಟಕದಲ್ಲಿ ಅಕಾಲಿಕ, ಅಧಿಕ ಮಳೆ: 18,097 ಹೆಕ್ಟೇರ್ ಕೃಷಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 16:09 IST
Last Updated 22 ಜುಲೈ 2025, 16:09 IST
ಕುಶಾಲನಗರ ಸಮೀಪದ ಹುಲುಸೆ ಗ್ರಾಮದಲ್ಲಿ ಕಾವೇರಿ ನದಿಯ ಹೆಚ್ಚುವರಿ ನೀರು ರೈತರ ಜಮೀನುಗಳಿಗೆ ನುಗ್ಗಿದ್ದುಅಪಾರ ಪ್ರಮಾಣದಲ್ಲಿ ರೈತ ಕಪನಪ್ಪ ಅವರ ಶುಂಠಿ ಜೋಳ ಕೃಷಿಗೆ ಹಾನಿ ಉಂಟಾಗಿದೆ.
ಕುಶಾಲನಗರ ಸಮೀಪದ ಹುಲುಸೆ ಗ್ರಾಮದಲ್ಲಿ ಕಾವೇರಿ ನದಿಯ ಹೆಚ್ಚುವರಿ ನೀರು ರೈತರ ಜಮೀನುಗಳಿಗೆ ನುಗ್ಗಿದ್ದುಅಪಾರ ಪ್ರಮಾಣದಲ್ಲಿ ರೈತ ಕಪನಪ್ಪ ಅವರ ಶುಂಠಿ ಜೋಳ ಕೃಷಿಗೆ ಹಾನಿ ಉಂಟಾಗಿದೆ.   

ನವದೆಹಲಿ: ಕರ್ನಾಟಕದಲ್ಲಿ ಅಕಾಲಿಕ ಹಾಗೂ ಅಧಿಕ ಮಳೆಯಿಂದಾಗಿ ಏಪ್ರಿಲ್‌ 1ರಿಂದ ಜುಲೈ 16ರ ನಡುವೆ 18,097 ಹೆಕ್ಟೇರ್ ಕೃಷಿ ‍ಪ್ರದೇಶಕ್ಕೆ ಹಾನಿಯಾಗಿದೆ. 

ಲೋಕಸಭೆಯಲ್ಲಿ ಮಂಗಳವಾರ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್‌, ‘ಮಳೆಯಿಂದಾಗಿ 89 ಮಂದಿ ಮೃತಪಟ್ಟಿದ್ದಾರೆ. 807 ಜಾನುವಾರುಗಳು ಸತ್ತಿವೆ. 3,901 ಮನೆಗಳಿಗೆ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ. 

ವಿಪತ್ತು ಪರಿಹಾರ ನಿಧಿಯಡಿ ಈ ವರ್ಷ ಕೇಂದ್ರ ಸರ್ಕಾರವು 22 ರಾಜ್ಯಗಳಿಗೆ ₹9,578 ಕೋಟಿ ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.