ADVERTISEMENT

ಕಂಠೀರವ ಸ್ಟುಡಿಯೊಗೆ ಅಂಬರೀಷ್ ಪಾರ್ಥಿವ ಶರೀರ ಆಗಮನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 10:36 IST
Last Updated 26 ನವೆಂಬರ್ 2018, 10:36 IST
   

ಬೆಂಗಳೂರು: ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 3.47 ಗಂಟೆಗೆ ಕಂಠೀರವ ಸ್ಟುಡಿಯೊಗೆ ತರಲಾಯಿತು.

ಕಂಠೀರವ ಕ್ರೀಡಾಂಗಣದಿಂದ 13 ಕಿ.ಮೀ ದೂರ ಸಾಗಿ ಅಂತಿಮ ಯಾತ್ರೆ ಕಂಠೀರವ ಸ್ಟುಡಿಯೊ ತಲುಪಿತು.

ಅಭಿಮಾನಿಗಳು ಮತ್ತು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ದರ್ಶನ ಪಡೆದರು. ಜನಸ್ತೋಮ ನಿಯಂತ್ರಣಕ್ಕೆ ಪೊಲೀಸರು ಪ್ರಯಾಸಪಟ್ಟರು.

ADVERTISEMENT

ಗೊರಗುಂಟೆಪಾಳ್ಯದ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು.ಅಂಬರೀಷ್ ಅವರ ದರ್ಶನ ಪಡೆಯಲು ರಸ್ತೆ ಯಲ್ಲಿನ ಬ್ಯಾರಿಕೇಡ್ ಅನ್ನು ಅಭಿಮಾನಿಗಳು ಮುರಿದು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.