ಬೆಂಗಳೂರು: ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 3.47 ಗಂಟೆಗೆ ಕಂಠೀರವ ಸ್ಟುಡಿಯೊಗೆ ತರಲಾಯಿತು.
ಕಂಠೀರವ ಕ್ರೀಡಾಂಗಣದಿಂದ 13 ಕಿ.ಮೀ ದೂರ ಸಾಗಿ ಅಂತಿಮ ಯಾತ್ರೆ ಕಂಠೀರವ ಸ್ಟುಡಿಯೊ ತಲುಪಿತು.
ಅಭಿಮಾನಿಗಳು ಮತ್ತು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ದರ್ಶನ ಪಡೆದರು. ಜನಸ್ತೋಮ ನಿಯಂತ್ರಣಕ್ಕೆ ಪೊಲೀಸರು ಪ್ರಯಾಸಪಟ್ಟರು.
ಗೊರಗುಂಟೆಪಾಳ್ಯದ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು.ಅಂಬರೀಷ್ ಅವರ ದರ್ಶನ ಪಡೆಯಲು ರಸ್ತೆ ಯಲ್ಲಿನ ಬ್ಯಾರಿಕೇಡ್ ಅನ್ನು ಅಭಿಮಾನಿಗಳು ಮುರಿದು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.