ADVERTISEMENT

ರಾಹುಲ್‌ ಗಾಂಧಿಯಂತಹ ಹೈಬ್ರಿಡ್ ತಳಿ ಜಗತ್ತಿನ ಯಾವ ಪ್ರಯೋಗಾಲಯದಲ್ಲಿಯೂ ಸಿಗಲ್ಲ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಟೀಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 11:11 IST
Last Updated 30 ಜನವರಿ 2019, 11:11 IST
   

ಶಿರಸಿ:ಕಾಂಗ್ರೆಸ್ ಅಧ್ಯಕ್ಷರಾಹುಲ್ ಗಾಂಧಿ ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್, ಮಗ ಹೇಗಪ್ಪಾ ಬ್ರಾಹ್ಮಣ ? ಇಂಥ ಹೈಬ್ರಿಡ್ ತಳಿ ಜಗತ್ತಿನ ಯಾವ ಪ್ರಯೋಗಾಲಯದಲ್ಲಿಯೂ ಸಿಗುವುದಿಲ್ಲ. ನಮ್ಮ ದೇಶದ‌ ಕಾಂಗ್ರೆಸ್ ಪ್ರಯೋಗಾಲಯದಲ್ಲಿ‌ ಮಾತ್ರ ಸಿಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ ಟೀಕಿಸಿದರು.

ಶಿರಸಿ ತಾಲ್ಲೂಕಿನ ದನಗನಳ್ಳಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ನಮಗೆ ಆತ್ಮಾಹುತಿ ದಳ ಗೊತ್ತಿದೆ. ಮಹಾಘಟ ಬಂಧನ್ ಇದು ಆತಹತ್ಯೆ ದಳ. ಮೇ ಅಂತ್ಯದೊಳಗಾಗಿ ಮಹಾಘಟ ಬಂಧನ್ ಪ್ರಮುಖರು ಹೆಸರಿನಲ್ಲಿ ಸಾಮೂಹಿಕ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ. ಭಾರೀ ದೊಡ್ಡ ಆತ್ಮಹತ್ಯೆ ಕಾರ್ಯಕ್ರಮ ನಡೆಯಲಿದೆ. ರಾಹುಲ್ ಕೊಲಂಬಿಯಾ ಹೋಗಲಿದ್ದಾರೆ ಎಂದರು.

ADVERTISEMENT

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆ, ಬಾವಿ, ಹೊಸ ಗಿಡ ನೆಟ್ಟರೂ ಕಮಿಷನ್‌ ಬಿಡಲಿಲ್ಲ. ದೇಶಪಾಂಡೆಗೆ ಪರ್ಸೆಂಟೇಜ್‌ ಪಾಂಡೆ ಅಂತ ಇನ್ನೊಂದು ಹೆಸರಿದೆ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.