ಬೆಂಗಳೂರು: ‘ಅನಂತ ಕುಮಾರ್ ಅವರಿಂದಾಗಿ ವಿಶ್ವಸಂಸ್ಥೆಯಲ್ಲಿ ಕನ್ನಡದ ಮಾತು ಕೇಳಲು ಸಾಧ್ಯವಾಯಿತು. ಅವರು ಆಡಿದ ಕೆಲವೇ ಪದಗಳಿಂದ ನಮ್ಮ ಭಾಷೆಯ ಕಂಪು ವಿಶ್ವಮಟ್ಟದಲ್ಲಿ ಪಸರಿಸಿತು’ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.
ಅನಂತ ಕುಮಾರ್ ಪ್ರತಿಷ್ಠಾನವು ‘ಅನಂತ ಪಥ’ ಸಂಚಿಕೆ ಬಿಡುಗಡೆಗಾಗಿ ಆನ್ಲೈನ್ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತೀಯ ಪರಂಪರೆಯಲ್ಲಿ ಕರ್ನಾಟಕದ ಮತ್ತು ಕನ್ನಡಿಗರ ವಿಶ್ವಮಾನವ ತತ್ವವನ್ನು ರೂಢಿಸಿಕೊಂಡು, ಬೆಳೆಸಿದವರು ಅನಂತಕುಮಾರ್.ಭಾಷೆ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿದ್ದ ಅವರುಕನ್ನಡಕ್ಕಾಗಿ ನಿರಂತರ ಕೆಲಸ ಮಾಡಿದ ಬಹುಮುಖ್ಯ ರಾಜಕೀಯ ನಾಯಕ’ ಎಂದರು.
‘ಕನ್ನಡ ಭಾಷೆ, ನೆಲ ಮತ್ತು ಜಲದ ವಿಚಾರದಲ್ಲಿ ಯಾವುದೇ ತೊಂದರೆ ಎದುರಾದರೂ ಅದರ ನಿವಾರಣೆಗಾಗಿ ಮುಂಚೂಣಿಯಲ್ಲಿ ನಿಂತು ಶ್ರಮಿಸುತ್ತಿದ್ದರು. ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತಿದ್ದರು. ಕನ್ನಡ ಕಾರ್ಯಕರ್ತರಿಗೆ ಅವರ ಮನೆ ತೆರೆದ ಬಾಗಿಲು. ಅವರ ಆತಿಥ್ಯ ಪಡೆಯದ ಕನ್ನಡ ಕಾರ್ಯಕರ್ತ ಇರಲು ಸಾಧ್ಯವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.