ADVERTISEMENT

25ರಂದು ಆರ್ಯ ಈಡಿಗ ವಧುವರರ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 18:06 IST
Last Updated 12 ನವೆಂಬರ್ 2018, 18:06 IST

ಬೆಂಗಳೂರು: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ 19ನೇ ವರ್ಷದ ವಧುವರರ ಮುಖಾಮುಖಿ ಕಾರ್ಯಕ್ರಮ ನ. 25ರಂದು ಶೇಷಾದ್ರಿಪುರ ರಾಜೀವ ಗಾಂಧಿ ವೃತ್ತದ ಬಳಿಯ ಆರ್ಯ ಈಡಿಗರ ಭವನದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿದೆ.

ಅರ್ಹ, ಆಸಕ್ತ ವಧುವರರು ನ. 20ರ ಒಳಗೆ ಹೆಸರು ನೋಂದಾಯಿಸಬೇಕು ಎಂದು ಸಂಘದ ಜಂಟಿ ಕಾರ್ಯದರ್ಶಿ ಜಿ.ಒ. ಕೃಷ್ಣ ತಿಳಿಸಿದ್ದಾರೆ.

ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಪೋಸ್ಟ್‌ ಕಾರ್ಡ್‌ ಅಳತೆಯ ಭಾವಚಿತ್ರದೊಂದಿಗೆ ಸಲ್ಲಿಸಬೇಕಾದ ವಿಳಾಸ:ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ನಂ 185, ಈಡಿಗ ಭವನ ರಾಜೀವ ಗಾಂಧಿ ವೃತ್ತ, ಶೇಷಾದ್ರಿಪುರ ಬೆಂಗಳೂರು –20. ದೂರವಾಣಿ:080-23560574/ 48145442

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.