ತುಮಕೂರು: ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಶಿವಮೊಗ್ಗದ ಡಾ.ವಿವೇಕ್ ದೊರೈ ಆಯ್ಕೆಯಾಗಿದ್ದಾರೆ.
ನಗರ ಹೊರ ವಲಯದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಎಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಭಾನುವಾರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಎಲೆಕ್ಟ್ ಅಧ್ಯಕ್ಷರಾಗಿ ವಿಜಯಪುರದ ಡಾ.ರವೀಂದ್ರನಾಥ ಎಂ.ಮೇಟಿ, ಕಾರ್ಯದರ್ಶಿಯಾಗಿ ಡಾ.ಕೆ.ಎನ್.ಚಂದ್ರಮೋಹನ್, ಎಲೆಕ್ಟ್ ಕಾರ್ಯದರ್ಶಿಯಾಗಿ ಡಾ.ಪಿ.ಆರ್.ತಿಮ್ಮರಾಜು, ಖಜಾಂಚಿಯಾಗಿ ಡಾ.ಎನ್.ನರಸಿಂಹಮೂರ್ತಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಡಾ.ಬಿ.ಕೆ.ಮಂಜುನಾಥ್ ಆಯ್ಕೆಯಾದರು.
ಬೆಂಗಳೂರು ವಿಭಾಗದ ಉಪಾಧ್ಯಕ್ಷರಾಗಿ ಡಾ.ಎಚ್.ಆರ್.ರಾಜಶೇಖರಯ್ಯ, ಜಂಟಿ ಕಾರ್ಯದರ್ಶಿಯಾಗಿ ಡಾ.ಎಸ್.ಎಲ್. ಸವಿತಾ, ಬೆಂಗಳೂರು-ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿ ಡಾ.ಬಿ.ಎಂ.ಶಿವಸ್ವಾಮಿ, ಮೈಸೂರು ವಿಭಾಗದ ಉಪಾಧ್ಯಕ್ಷ
ರಾಗಿ ಡಾ.ಕೆ.ಪಿ.ದೇವಿ ಆನಂದ್, ಜಂಟಿ ಕಾರ್ಯದರ್ಶಿಯಾಗಿ ಡಾ.ಸೂರ್ಯನಾರಾಯಣ ಆಯ್ಕೆಯಾಗಿದ್ದಾರೆ.
ಬೆಳಗಾವಿ ವಿಭಾಗದ ಉಪಾಧ್ಯಕ್ಷರಾಗಿ ಡಾ.ಆರ್.ಎಂ.ಭೋವೇರ, ಜಂಟಿ ಕಾರ್ಯದರ್ಶಿಯಾಗಿ ಡಾ.ಬಿ.ಎಂ.ಗೋಜನೂರ, ಬೆಳಗಾವಿ- ಕಲಬುರಗಿ ಸಂಘಟನಾ ಕಾರ್ಯದರ್ಶಿಯಾಗಿ ಡಾ.ಕೆ.ಶರಣ ಬಸಪ್ಪ, ಕಲಬುರಗಿ ವಿಭಾಗದ ಉಪಾಧ್ಯಕ್ಷರಾಗಿ ಡಾ.ಕಿರಣ್ ಎಂ.ಪಾಟೀಲ್, ಜಂಟಿ ಕಾರ್ಯದರ್ಶಿಯಾಗಿ ಡಾ.ರುದ್ರೇಗೌಡ ಪೊಲೀಸ್ ಪಾಟೀಲ್ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.