ADVERTISEMENT

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ₹50 ಲಕ್ಷ ನೆರವು: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 4:12 IST
Last Updated 29 ಜುಲೈ 2022, 4:12 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಮಂಗಳೂರು: ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ₹25 ಲಕ್ಷ ಹಾಗೂ ಬಿಜೆಪಿ ವತಿಯಿಂದ ₹ 25 ಲಕ್ಷ ಸೇರಿ ಒಟ್ಟು ₹ 50 ಲಕ್ಷ ಮೊತ್ತದ ಪರಿಹಾರದಚೆಕ್‌ ಹಸ್ತಾಂತರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿತಿಳಿಸಿದರು.

‘ಕುಟುಂಬಕ್ಕೆ ಪ್ರವೀಣ್ ಅವರೇ ಆಧಾರವಾಗಿದ್ದರು. ಚಿಕ್ಕ ಅಂಗಡಿಯೇ ಅವರ ಕುಟುಂಬದ ಆದಾಯದ ಮೂಲವಾಗಿತ್ತು. ಅವರ ಕುಟುಂಬದವರಿಗೆ ಪಕ್ಷ ಮತ್ತು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT