ADVERTISEMENT

ಪಂಚಮಸಾಲಿ ಸಮಾಜದ ಶಾಸಕರೇ ಕುಮ್ಮಕ್ಕು ನೀಡಿ ಲಾಠಿಚಾರ್ಜ್‌: ಪಂಚಮಸಾಲಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 11:30 IST
Last Updated 12 ಡಿಸೆಂಬರ್ 2024, 11:30 IST

ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಮೀಸಲಾತಿಗಾಗಿ ಹೋರಾಟ ನಡೆಸಿದ ಪಂಚಮಸಾಲಿ ಸಮಾಜದವರ ಮೇಲೆ ಲಾಠಿಚಾರ್ಜ್ ಮಾಡಿದ ವಿಷಯ ಗುರುವಾರ ಮತ್ತೆ ಪ್ರತಿಧ್ವನಿಸಿತು. ಬೆಳಗಾವಿ ಸಮೀಪದ ಹಿರೇಬಾಗೇವಾಡಿಯ ಟೋಲ್‌ನಾಕಾ ಬಳಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಿದರು. ಪಂಚಮಸಾಲಿ ಸಮಾಜದವರೇ ಆದ ಒಬ್ಬ ಶಾಸಕರೇ ಕುಮ್ಮಕ್ಕು ನೀಡಿ ಲಾಠಿಚಾರ್ಜ್‌ ಮಾಡಿಸಿದ್ದಾರೆ ಎಂದೂ ಸ್ವಾಮೀಜಿ ಗಂಭೀರ ಆರೋಪ ಮಾಡಿದರು. ಕೊಂಡಿ ಮಂಚಣ್ಣ ಇದ್ದ, ಮಲ್ಲಪ್ಪಶೆಟ್ಟಿ ಅಂಥವರು ಇನ್ನೂ ಇದ್ದಾರೆ. ತಮ್ಮ ಸಚಿವ ಸ್ಥಾನಕ್ಕಾಗಿ ಗೋಲಿಬಾರ್‌ ಬೇಕಾದರೂ ಮಾಡಿಸಲಿ ಎಂದೂ ಅವರು ಕಿಡಿ ಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.