ಬೆಂಗಳೂರು: ಕೋವಿಡ್ ಬಿಕ್ಕಟ್ಟಿನಿಂದಾಗಿ ವಿಮಾನಯಾನ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಕಾರಣ ಆದಾಯಕ್ಕೂ ಪೆಟ್ಟು ಬಿದ್ದಿದೆ.
ಭಾರತದಲ್ಲಿ 2020ರ ಮೇ25ರಂದು ದೇಶೀಯ ವಿಮಾನ ಹಾರಾಟ ಪುನರಾರಂಭವಾಗಿತ್ತು. ಅಂದಿನಿಂದ ಈವರೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ಒಟ್ಟು1.91 ಕೋಟಿ ಮಂದಿ ಪ್ರಯಾಣ ಬೆಳೆಸಿದ್ದಾರೆ.2019–20ನೇ ಸಾಲಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಶೇ 66ರಷ್ಟು ಕಡಿಮೆ.
‘ಪ್ರಸಕ್ತ ಆರ್ಥಿಕ ವರ್ಷ ದೇಶೀಯ ಮಾರ್ಗದಲ್ಲಿ1.45 ಕೋಟಿ ಮಂದಿ ಸಂಚರಿಸಿದ್ದಾರೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ (2.7 ಕೋಟಿ) ಇದು ಶೇ 63 ರಷ್ಟು ಕ್ಷೀಣಿಸಿದೆ. ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕೇವಲ46 ಸಾವಿರ ಮಂದಿ ಪ್ರಯಾಣ ಬೆಳೆಸಿದ್ದಾರೆ. ಹಿಂದಿನ ವರ್ಷಕ್ಕೆ ತುಲನೆ ಮಾಡಿದರೆ ಇದು ಶೇ 90ರಷ್ಟು ಕಡಿಮೆ. ಕೋವಿಡ್ನಿಂದಾಗಿ ಎಲ್ಲಾ ರಾಷ್ಟ್ರಗಳು ವಿಮಾನ ಯಾನದ ಮೇಲೆ ನಿರ್ಬಂಧ ಹೇರಿದ್ದು ಇದಕ್ಕೆ ಕಾರಣ’ ಎಂದು ಪ್ರಕಟಣೆ ತಿಳಿಸಿದೆ.
‘ಏರ್ ಟ್ರಾಫಿಕ್ ಮೂವ್ಮೆಂಟ್ಸ್ ಕೂಡ2.31 ಲಕ್ಷದಿಂದ1.13 ಲಕ್ಷಕ್ಕೆ ತಗ್ಗಿದೆ. ಸರಕು ಸಾಗಾಣೆಯು3.74 ಲಕ್ಷ ಮೆಟ್ರಿಕ್ ಟನ್ನಿಂದ3.26 ಲಕ್ಷ ಮೆಟ್ರಿಕ್ ಟನ್ಗೆ ಇಳಿದಿದೆ. ಹೀಗಿದ್ದರೂ ಕೂಡ ಬಿಐಎಎಲ್ ತಾನು ಯೋಜಿಸಿರುವಂತೆ ಮೂಲ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧವಾಗಿದೆ’ ಎಂದೂ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.