
ಪ್ರಜಾವಾಣಿ ವಾರ್ತೆ
ಬಿಜೆಪಿ
ಬೆಂಗಳೂರು: ಈಶಾನ್ಯ, ಬೆಂಗಳೂರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ಗೆ ಮುಂದಿನ ವರ್ಷ ನಡೆಯುವ ಚುನಾವಣೆಗೆ ನೋಂದಣಿ ಮತ್ತು ಚುನಾವಣಾ ಸಂಘಟನೆ ಕೈಗೊಳ್ಳಲು ಸಂಚಾಲಕರು ಮತ್ತು ಸಹ ಸಂಚಾಲಕರನ್ನು ಬಿಜೆಪಿ ನೇಮಕ ಮಾಡಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಅಮರನಾಥ ಪಾಟೀಲ (ಸಂಚಾಲಕ), ನವೀನ್ ಗುಳ್ಳಣ್ಣನವರ್ (ಸಹ–ಸಂಚಾಲಕ), ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಅರುಣ್ ಶಹಾಪುರ (ಸಂಚಾಲಕ), ಸಂತೋಷ್ ದೇವರೆಡ್ಡಿ (ಸಹ–ಸಂಚಾಲಕ), ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ವೈ.ಎ.ನಾರಾಯಣಸ್ವಾಮಿ (ಸಂಚಾಲಕ), ಚಿದಾನಂದ ಎಂ. ಗೌಡ (ಸಹ–ಸಂಚಾಲಕ), ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಎಸ್.ಕೇಶವ ಪ್ರಸಾದ್ (ಸಂಚಾಲಕ), ಎಸ್.ಎನ್.ರಾಜಣ್ಣ (ಸಹ–ಸಂಚಾಲಕ) ಅವರನ್ನು ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.