ಮೈಸೂರು: ಕೆಆರ್ಎಸ್ನ ಬೃಂದಾವನ ಉದ್ಯಾನ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಏರಿಸಲಾಗಿದೆ. ಜತೆಗೆ ಸೇತುವೆ ಟೋಲ್ ಸಂಗ್ರಹದ ಹೊಣೆಯನ್ನು ಕಾವೇರಿ ನೀರಾವರಿ ನಿಗಮವು ಖಾಸಗಿಯವರಿಗೆ ನೀಡಿದೆ.
ಉದ್ಯಾನ ಪ್ರವೇಶ ಶುಲ್ಕ ಏರಿಕೆ ಅ. 1ರಿಂದ ದರ ಜಾರಿಗೆ ಬಂದಿದ್ದು, ವಯಸ್ಕರಿಗೆ ₹ 20ರಿಂದ 50ಕ್ಕೆ ಏರಿಕೆ ಮಾಡಲಾಗಿದೆ. ಮಕ್ಕಳಿಗೆ ₹ 10, ಶಾಲಾ ಮಕ್ಕಳಿಗೆ ₹ 5 ನಿಗದಿ ಮಾಡಲಾಗಿದೆ. ಬೃಂದಾವನಕ್ಕೆ ನಿತ್ಯ ಸರಾಸರಿ ಏಳು ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ನಿಗಮಕ್ಕೆ ವಾರ್ಷಿಕ ₹ 12.6 ಕೋಟಿ ಆದಾಯ ನಿರೀಕ್ಷೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.