ADVERTISEMENT

ಬಾಯಿತಪ್ಪಿನಿಂದ ಉಮೇಶ ಕತ್ತಿ ಹೇಳಿಕೆ ನೀಡಿದ್ದಾರೆ: ಸಚಿವ ಭೈರತಿ ಬಸವರಾಜ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 10:31 IST
Last Updated 15 ಫೆಬ್ರುವರಿ 2021, 10:31 IST
   

ಮಡಿಕೇರಿ: ‘ಬೈಕ್‌, ಆಟೋ ರಿಕ್ಷಾ, ಪ್ರಿಡ್ಜ್‌ ಹೊಂದಿರುವ ಬಡ ಕುಟುಂಬಕ್ಕೆ ಪಡಿತರ ವಿತರಣೆಗೆ ಅವಕಾಶವಿದೆ. ಸಚಿವ ಉಮೇಶ್‌ ಕತ್ತಿ ಅವರು ಈ ರೀತಿ ಹೇಳಲು ಹೋಗಿ ಬಾಯಿತಪ್ಪಿನಿಂದ ಅವಕಾಶವಿಲ್ಲ ಎಂದಿರಬಹುದು’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಇಲ್ಲಿ ಸೋಮವಾರ ಸ್ಪಷ್ಟನೆ ನೀಡಿದರು.

‘ಅವರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುತ್ತೇನೆ. ತಮ್ಮ ಹೇಳಿಕೆಗೆ ಕತ್ತಿ ಅವರೇ ಸ್ಪಷ್ಟನೆ ನೀಡಲಿದ್ದಾರೆ ಎಂದ ಅವರು, ಬಿಪಿಎಲ್‌ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಈಗ ಕಾರ್ಡ್‌ ವಿತರಣೆಗೆ ಮರು ಚಾಲನೆ ನೀಡಲಾಗಿದೆ.

ಇಂತಹ ಸಂದರ್ಭದಲ್ಲಿ ಪಡಿತರ ವಿತರಣೆ ಸ್ಥಗಿತದಂತಹ ಆದೇಶ ಹೊರಡಿಸುವುದಿಲ್ಲ’ ಎಂದು ಸಚಿವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.