ADVERTISEMENT

ಮೇಕೆದಾಟು ಡ್ಯಾಂ ವಿರೋಧಿಸಿದ ಅಣ್ಣಾಮಲೈ ಟ್ವೀಟ್‌ಗೆ ಬೆಂಬಲ: ರವಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 13:01 IST
Last Updated 8 ಆಗಸ್ಟ್ 2021, 13:01 IST
ಅಣ್ಣಾಮಲೈ ಮತ್ತು ಸಿ.ಟಿ ರವಿ
ಅಣ್ಣಾಮಲೈ ಮತ್ತು ಸಿ.ಟಿ ರವಿ    

ಬೆಂಗಳೂರು: ಮೇಕೆದಾಟು ಸಮಾನಾಂತರ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಟ್ವೀಟ್‌ ಅನ್ನು ಮರು ಟ್ವೀಟ್‌ ಮಾಡಿ ಬೆಂಬಲಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ನಡೆಗೆ ತೀವ್ರ ಟೀಕೆವ್ಯಕ್ತವಾಗಿದೆ.

ತಂಜಾವೂರಿನಲ್ಲಿ ಇದೇ 5ರಂದು ನಡೆದ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದ ಫೋಟೊಗಳನ್ನು ಹಂಚಿಕೊಂಡಿದ್ದ ಅಣ್ಣಾಮಲೈ, ‘ಯೋಜನೆ ಜಾರಿಗೆ ಒತ್ತಡ ಹೇರದಂತೆ ಕರ್ನಾಟಕದ ಸಹೋದರ, ಸಹೋದರಿಯರಲ್ಲಿ ಮನವಿ ಮಾಡುತ್ತೇನೆ’ ಎಂದು ಸಂದೇಶ ಹಾಕಿದ್ದರು. ಅದನ್ನು ಶಾಸಕರೂ ಆಗಿರುವ ರವಿ ಮರು ಟ್ವೀಟ್‌ ಮಾಡಿ ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT