ADVERTISEMENT

7 ಸಚಿವರ ಖಾತೆ ಬದಲಾವಣೆ: ಯಾರಿಗೆ ಯಾವ ಖಾತೆ? 

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 11:40 IST
Last Updated 11 ಫೆಬ್ರುವರಿ 2020, 11:40 IST
   

ಬೆಂಗಳೂರು: ಖಾತೆಗಳ ಬಗ್ಗೆ ಅಸಮಾಧಾನಗೊಂಡ ಸಚಿವರ ಸಂಖ್ಯೆ ಹೆಚ್ಚಾದ ಬೆನ್ನಲ್ಲೆ ಮಂಗಳವಾರ ಸಂಜೆ ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ.

ಬಿ.ಸಿ.ಪಾಟೀಲ ಅವರಿಗೆ ಕೃಷಿ, ಕೆ. ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ, ಶಿವರಾಂ ಹೆಬ್ಬಾರ್‌ ಅವರಿಗೆ ಕಾರ್ಮಿಕ ಖಾತೆ ಜೊತೆಗೆ ಸಕ್ಕರೆ ಖಾತೆಯನ್ನು ನೀಡಲಾಹಿದೆ. ಆನಂದ್‌ಸಿಂಗ್‌ ಅವರಿಗೆ ಅರಣ್ಯ ಮತ್ತು ಜೀವಿ ಶಾಸ್ತ್ರ ಖಾತೆ ನೀಡಲಾಗಿದೆ.

ಸಿ.ಸಿ.ಪಾಟೀಲ್‌ ಅವರಿಗೆ ಗಣಿ ಮತ್ತು ಭೂ ವಿಜ್ಞಾನ, ಪ್ರಭು ಚೌಹಣ್‌ ಅವರಿಗೆ ಪಶುಸಂಗೋಪನೆ ಖಾತೆ ಜೊತೆಗೆ ಹಜ್‌ ಮತ್ತು ವಕ್ಫ್‌ ಖಾತೆ ನೀಡಲಾಗಿದೆ. ಶ್ರೀಮಂತ್ ಪಾಟೀಲ್‌ ಅವರಿಗೆ ಜವಳಿ ಖಾತೆ ಜೊತೆಗೆ ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಯನ್ನು ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.