ADVERTISEMENT

ವರ್ಗಾವಣೆಯಿಂದ ವಿನಾಯಿತಿ ಪಡೆದಿದ್ದ ಕ್ಯಾನ್ಸರ್‌ ಪೀಡಿತೆ ಸಾವು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:00 IST
Last Updated 17 ಅಕ್ಟೋಬರ್ 2019, 20:00 IST

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರ ಮಧ್ಯಪ್ರವೇಶದಿಂದ ಈ ಬಾರಿಯ ವರ್ಗಾವಣೆಯಿಂದ ಪಾರಾಗಿದ್ದ ನಗರದ ಎಲ್ಲಕುಂಟೆಯ ಕ್ಯಾನ್ಸರ್‌ ಪೀಡಿತ ಶಿಕ್ಷಕಿ ಮಹೇಶ್ವರಿ ನಿಧನರಾಗಿದ್ದಾರೆ.

‘ಶಿಕ್ಷಕಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಮಹೇಶ್ವರಿ ಅವರ ಅನಾರೋಗ್ಯದ ಕುರಿತು ನನಗೆ ಮಾಹಿತಿ ದೊರಕಿದ್ದು ಮಾಧ್ಯಮಗಳಿಂದಲೇ. ಅವರ ನಿಧನದ ಕುರಿತೂ ಸಹ ಮಾಧ್ಯಮಗಳಿಂದಲೇ ಮಾಹಿತಿ ದೊರೆಯಿತು. ಹೀಗಾಗಿ ಬುಧವಾರದೊಡ್ಡಬಾಣಸವಾಡಿಗೆ ಹೋಗಿ, ಅವರ ಪಾರ್ಥಿವ ಶರೀರದ ಅಂತಿಮ‌ ದರ್ಶನ ಪಡೆದು ನಮಸ್ಕರಿಸಿ ಬಂದೆ’ ಎಂದು ಸಚಿವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT