ADVERTISEMENT

ಪ್ರಸಾದಕ್ಕೆ ಮಾನದಂಡ: ಪ್ರಸ್ತಾವ ತಿರಸ್ಕೃತ

ಮೈಸೂರಿನ ಸಿಎಫ್‌ಟಿಆರ್‌ಐ ನಡೆಸಿದ್ದ ಪ್ರಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:15 IST
Last Updated 9 ನವೆಂಬರ್ 2018, 20:15 IST

ಮೈಸೂರು: ದೇವಸ್ಥಾನಗಳಲ್ಲಿ ನೀಡುತ್ತಿರುವ ಪ್ರಸಾದದ ಗುಣಮಟ್ಟಕ್ಕೆ ಮಾನದಂಡಗಳನ್ನು ನಿಗದಿಪಡಿಸುವಂತೆ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಸಲ್ಲಿಸಿದ್ದ ಪ್ರಸ್ತಾವವನ್ನು ಆಹಾರ ಸಂರಕ್ಷಣಾ ಮತ್ತು ಮಾನದಂಡ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿರಸ್ಕರಿಸಿದೆ.

ಸಿಎಫ್‌ಟಿಆರ್‌ಐ ಹಿರಿಯ ವಿಜ್ಞಾನಿಗಳ ತಂಡವು ಈ ಕುರಿತು ನವದೆಹಲಿಯಲ್ಲಿರುವ ಎಫ್‌ಎಸ್‌ಎಸ್‌ಎಐ ಕಚೇರಿಗೆ ಅಕ್ಟೋಬರ್‌ನಲ್ಲಿ 30 ಪುಟಗಳ ಪ್ರಸ್ತಾವ ಸಲ್ಲಿಸಿತ್ತು. ಪ್ರಸಾದದ ಗುಣಮಟ್ಟ ಮಾತ್ರವಲ್ಲದೇ; ಲಡ್ಡು, ಕಜ್ಜಾಯ, ಪಾಯಸಕ್ಕೆ ಬಳಸುವಪದಾರ್ಥಗಳ ಶೇಖರಣೆಯಲ್ಲೂ ಗುಣಮಟ್ಟದ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಕೋರಿಕೆಗೂ ಮನ್ನಣೆ ಸಿಕ್ಕಿಲ್ಲ.

‘ಗುಣಮಟ್ಟದ ಪ್ರಸಾದ ವಿತರಣೆಗೆ ದೇಶದಾದ್ಯಂತ ಯಾವುದೇ ಮಾನದಂಡ ನಿಗದಿಪಡಿಸಿಲ್ಲ. ಈ ಕುರಿತು ನಿಯಂತ್ರಣಾ ವಿಧಾನಗಳನ್ನೂ ಪಾಲಿಸುತ್ತಿಲ್ಲ. ಹೀಗಾಗಿ, ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದಕ್ಕಾಗಿ ಬಳಸುವ ಪದಾರ್ಥಗಳ ನಿರ್ವಹಣೆ, ತಿನಿಸುಗಳ ತಯಾರಿಕೆ, ಯಾಂತ್ರೀಕರಣಕ್ಕೆ ಆದ್ಯತೆ ನೀಡುವ ಸಲುವಾಗಿ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಲಾಗಿತ್ತು’ ಎಂದು ಸಿಎಫ್‌ಟಿಆರ್‌ಐ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

ADVERTISEMENT

ಹಲವು ದೇವಸ್ಥಾನಗಳಲ್ಲಿ ನೀಡುತ್ತಿರುವ ಪ್ರಸಾದದ ಗುಣಮಟ್ಟ ಉತ್ತಮವಾಗಿಲ್ಲ. ಆರೋಗ್ಯಕ್ಕೆಮಾರಕವಾಗುವಂತಹ ಆಹಾರ ಸಿದ್ಧವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪರಿಶೀಲನೆಗೆ ವಿರೋಧ: ದೇವಸ್ಥಾನಗಳಲ್ಲಿ ನೀಡುವ ಪ್ರಸಾದಕ್ಕೆಪಾವಿತ್ರ್ಯದ ಲೇಪವೂ ಇರುವುದರಿಂದ ಬಾಹ್ಯ ಸಂಸ್ಥೆಗಳಿಂದ ಗುಣಮಟ್ಟ ಪರಿಶೀಲನೆಗೆ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.