ADVERTISEMENT

ನಟ ಅಂಬರೀಶ್ ಟ್ರಸ್ಟ್ ರಚಿಸಲು ಸಿಎಂ ಭರವಸೆ:ರಾಕ್ ಲೈನ್ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 13:45 IST
Last Updated 28 ಅಕ್ಟೋಬರ್ 2019, 13:45 IST
   

ಬೆಂಗಳೂರು: ನಟ, ರಾಜಕಾರಣಿ ಡಾ.ಅಂಬರೀಶ್ ಪ್ರತಿಷ್ಠಾನಕ್ಕೂಟ್ರಸ್ಟ್ ರಚಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು 24ರ ಒಳಗೆ ಅಂಬರೀಶ್ ಟ್ರಸ್ಟ್ ರಚಿಸಬೇಕೆಂದು ಮನವಿ ಮಾಡಿದ್ದೆವು. ಈ ಮನವಿಯನ್ನು ಪುರಸ್ಕರಿಸಿದ್ದು ಟ್ರಸ್ಟ್ ರಚಿಸುವುದಾಗಿ ಹೇಳಿದ್ದಾರೆ ಎಂದರು.

ಡಾ.ರಾಜ್‌‌ಕುಮಾರ್ ಪ್ರತಿಷ್ಠಾನದ ಸ್ಥಳ ಈಗ ಒಂದು ಪ್ರವಾಸೋದ್ಯಮ ಸ್ಥಳವಾಗಿದೆ. ಈ ಪ್ರತಿಷ್ಠಾನವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಈ ಹಿಂದೆ ಈ ಯೋಜನೆಗೆ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 22 ಕೋಟಿ ಕೊಡಲು ಒಪ್ಪಿದ್ದು, ಅಲ್ಲದೆ,10 ಕೋಟಿ ಬಜೆಟ್ ನಲ್ಲಿ ನಿಗದಿ ಮಾಡಿದ್ದರು. ಈ ಅನುದಾನವನ್ನು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಯೂ ಕೇಳಿದ್ದೇವೆ. ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.