ಹುಬ್ಬಳ್ಳಿ: ‘ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಾಗಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್. ಪ್ರಕಾಶಂ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೂರ್ನಾಲ್ಕು ವರ್ಷಗಳ ಹಿಂದೆ ಸದಸ್ಯರಾದವರನ್ನು ಈಗ ನಕಲಿಯಾಗಿ ಸದಸ್ಯರಾಗಿದ್ದಾರೆ ಎಂದು ಅವರ ಸದಸ್ಯತ್ವ ರದ್ದು ಮಾಡುತ್ತಿದ್ದಾರೆ. ಆಗ ಕಟ್ಟಡ ಕಾರ್ಮಿಕರಾಗಿದ್ದವರು ಕೆಲಸ ದೊರೆಯಲಿಲ್ಲ ಎಂದು ಈಗ ಬೇರೆ ಕೆಲಸ ಮಾಡುತ್ತಿರಬಹುದು. ಅದನ್ನು ಕಾರಣವಾಗಿಟ್ಟುಕೊಂಡು ಅವರ ಸದಸ್ಯತ್ವ ರದ್ದು ಮಾಡಲಾಗುತ್ತಿದೆ’ ಎಂದು ದೂರಿದರು.
* ಇದನ್ನೂ ಓದಿ:ಕಾರ್ಮಿಕ ನಿಧಿಗೆ ರಕ್ಷಣೆ: ರೋಹಿಣಿ ಸಿಂಧೂರಿಗೆ ‘ಶಿಕ್ಷೆ’
ಕಾರ್ಮಿಕರ ಮಕ್ಕಳಿಗೆ ನೀಡುವ ಶಿಷ್ಯವೇತನ ಬಿಡುಗಡೆ ಮಾಡಿರಲಿಲ್ಲ ಎಂದು ದೂರಿದರು. ನಕಲಿ ದಾಖಲೆ ಸಲ್ಲಿಸಿ ಕೆಲವರು ಸದಸ್ಯತ್ವ ಪಡೆಯುತ್ತಿರಲಿಲ್ಲವೇ? ಅದನ್ನು ತಡೆಯಲುಹೋದದ್ದು ತಪ್ಪೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಲೋಪಗಳಾಗಿದ್ದರೆ ಸರಿಪಡಿಸಲಿ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿ. ಅದು ಬಿಟ್ಟು ಅನುದಾನ ಬಿಡುಗಡೆ ಮಾಡಿದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.