ಬೆಂಗಳೂರ:ಹುಣಸೂರುವಿಧಾಸಸಭಾಕ್ಷೇತ್ರದಲ್ಲಿ ಮತದಾರರಿಗೆಬಿಜೆಪಿಹಂಚಲು ಸಂಗ್ರಹಿಸಿದ್ದ30 ಸಾವಿರಸೀರೆಗಳು ಪತ್ತೆಯಾಗಿವೆಎಂದು ಆರೋಪಿಸಿ ಕಾಂಗ್ರೆಸ್ ಟ್ವೀಟ್ಮಾಡಿದೆ.
ಸೀರೆಯಪ್ಯಾಕ್ಮೇಲೆಸಿ.ಪಿಯೋಗೇಶ್ವರ್ ಅವರಭಾವ ಚಿತ್ರವಿದೆಎಂದು ಟ್ವೀಟ್ನಲ್ಲಿಕಾಂಗ್ರೆಸ್ಪಕ್ಷವು ಆರೋಪಿಸಿದ್ದು ಇದನ್ನು ಚುನಾವಣಾ ಆಯೋಗಕ್ಕೆ ಟ್ಯಾಗ್ ಮಾಡಿದೆ.
ಬಿಜೆಪಿಯು ಮತದಾರರಿಗೆ ಸೀರೆ ಹಂಚುವ ಮೂಲಕ ಮತದಾರರ ಮೇಲೆ ಪ್ರಭಾವಬೀರಲುಪ್ರಯತ್ನಿಸಿದೆ, ಹುಣಸೂರುಕ್ಷೇತ್ರದ ಬಿಜೆಪಿಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಅನರ್ಹ ಶಾಸಕ ಎಚ್.ವಿಶ್ವನಾಥ್,ಜೆಡಿಎಸ್ನಿಂದಸೋಮಶೇಖರ್ ಹಾಗೂ ಕಾಂಗ್ರೆಸ್ನಿಂದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ಅವರುಸ್ಪರ್ಧಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.