ADVERTISEMENT

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು 163ಕ್ಕೆ ಏರಿಕೆ: ಮೈಸೂರಿನಲ್ಲಿ 7 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 13:06 IST
Last Updated 6 ಏಪ್ರಿಲ್ 2020, 13:06 IST
ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ರಚಿಸಲಾಗಿರುವ ಫ್ಲೂ ಕಾರ್ನರ್‌ ಮುಂದೆ ಪರಿಕ್ಷೇಗಾಗಿ ನಿಂತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ರಚಿಸಲಾಗಿರುವ ಫ್ಲೂ ಕಾರ್ನರ್‌ ಮುಂದೆ ಪರಿಕ್ಷೇಗಾಗಿ ನಿಂತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ಸಂಜೆ 5 ಗಂಟೆಯ ವರೆಗೂ ಕೋವಿಡ್‌–19 ದೃಢಪಟ್ಟಿರುವ ಪ್ರಕರಣಗಳು 163ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಒಟ್ಟು 4 ಮಂದಿ ಸಾವಿಗೀಡಾಗಿದ್ದು, 20 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಏಪ್ರಿಲ್‌ 5, ಭಾನುವಾರ ಸಂಜೆ 5 ರಿಂದ ಸೋಮವಾರ ಸಂಜೆಯ ವರೆಗೂ ಒಟ್ಟು 12 ಹೊಸ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಏಳು ಮಂದಿ ಮೈಸೂರಿನವರು, ಇಬ್ಬರು ಬಾಗಲಕೋಟೆ, ಬೆಂಗಳೂರು, ಕೇರಳ ಹಾಗೂ ಬೆಂಗಳೂರು ಗ್ರಾಮಾಂತರದ ತಲಾ ಒಬ್ಬರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದು, ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ಇವರಲ್ಲಿ ಮೈಸೂರಿನ ಮೂವರು ಹಾಗೂ ಬೆಂಗಳೂರು ಗ್ರಾಮಾಂತರದ ಒಬ್ಬ ವ್ಯಕ್ತಿ ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ.

ADVERTISEMENT

ಪ್ರಸ್ತುತ ಒಬ್ಬರು ಗರ್ಭಿಣಿ ಸೇರಿದಂತೆ 139 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಮೂವರಿಗೆ ಐಸಿಯುನಲ್ಲಿ ವೆಂಟಿಲೇಟರ್‌ ಸಹಾಯದೊಂದಿಗೆ ಚಿಕಿತ್ಸೆ ಮುಂದುವರಿದಿದೆ. ರಾಜ್ಯದಲ್ಲಿ ಪತ್ತೆಯಾಗಿರುವ 163 ಪ್ರಕರಣಗಳ ಪೈಕಿ 9 ಮಂದಿ ಕೇರಳ ಮೂಲದವರಾಗಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಗಳ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರಲು ತೆರಳುವಾಗಪತ್ತೆ ಮಾಡಿ, ರಾಜ್ಯದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಭಾನುವಾರ ಕಾರವಾರ ಬಂದರಿನಲ್ಲಿ 22 ಜನರನ್ನು ತಪಾಸಣೆ ಒಳಪಡಿಸಲಾಗಿದೆ.

ಕರ್ನಾಟಕ–163
ಬೆಂಗಳೂರು 59
ಮೈಸೂರು 35
ಚಿಕ್ಕಬಳ್ಳಾಪುರ 07
ದಕ್ಷಿಣ ಕನ್ನಡ 12
ಕಲಬುರ್ಗಿ 05
ದಾವಣಗೆರೆ 03
ಉಡುಪಿ 03
ಬಳ್ಳಾರಿ 06
ತುಮಕೂರು 01
ಕೊಡಗು 01
ಧಾರವಾಡ 01
ಬೀದರ್‌ 10
ಬಾಗಲಕೋಟೆ 03
ಬೆಳಗಾವಿ 07
ಬೆಂಗಳೂರು ಗ್ರಾಮಾಂತರ 02

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.