ADVERTISEMENT

ಪಿಎಂ ಕೇರ್ಸ್‌ಗೆ ಟಿವಿಎಸ್‌ನಿಂದ ₹25 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 18:43 IST
Last Updated 30 ಮಾರ್ಚ್ 2020, 18:43 IST

ಬೆಂಗಳೂರು: ದೇಶದ ಪ್ರತಿಷ್ಠಿತ ದ್ವಿಚಕ್ರ, ತ್ರಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮೋಟರ್ಸ್‌, ‘ಪಿಎಂ ಕೇರ್ಸ್‌’ ಪರಿಹಾರ ನಿಧಿಗೆ ₹25 ಕೋಟಿ ದೇಣಿಗೆ ನೀಡಿದೆ.

ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯ ಘಟಕವಾದ ಶ್ರೀನಿವಾಸನ್‌ ಸರ್ವಿಸಸ್‌ ಟ್ರಸ್ಟ್‌ ಮೂಲಕ ಈ ದೇಣಿಗೆ ನೀಡಲಾಗಿದೆ ಕಂಪನಿಯ ಮುಖ್ಯಸ್ಥ ವೇಣು ಶ್ರೀನಿವಾಸನ್‌ ಹೇಳಿದ್ದಾರೆ.

ತುರ್ತು ಸೇವೆ ಒದಗಿಸುವ ಸಿಬ್ಬಂದಿಗೆ ಈಗಾಗಲೇ 10 ಲಕ್ಷ ಸುರಕ್ಷಿತ ಮುಖಗವಸು, ನಗರಪಾಲಿಕೆಗಳನ್ನು ಸೋಂಕು ಮುಕ್ತಗೊಳಿಸಲು ವಾಹನಗಳ ಒದಗಿಸುವಿಕೆ, ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಕಂಪನಿಯು ನೆರವು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.