ಬೆಂಗಳೂರು: ಮೇ 21ರ ಸಂಜೆ 5ರಿಂದ ಮೇ 22ರ ಮಧ್ಯಾಹ್ನ 12ಗಂಟೆವರೆಗೂ ರಾಜ್ಯದಲ್ಲಿ 105 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿವೆ.ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,710ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಂಕಿನಿಂದ ಈವರೆಗೂ 41 ಮಂದಿ ಸಾವಿಗೀಡಾಗಿದ್ದು, 588 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 1,080 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆಯಲ್ಲಿ 02, ಬೆಳಗಾವಿಯಲ್ಲಿ 01, ದಕ್ಷಿಣ ಕನ್ನಡದಲ್ಲಿ 01, ವಿಜಯಪುರದಲ್ಲಿ 04, ಮಂಡ್ಯದಲ್ಲಿ 8, ಕಲಬುರಗಿಯಲ್ಲಿ 7, ಬೀದರ್ನಲ್ಲಿ 10, ಉತ್ತರ ಕನ್ನಡ 1, ಹಾಸನದಲ್ಲಿ 21, ದಕ್ಷಿಣ ಕನ್ನಡದಲ್ಲಿ 1, ಬೆಂಗಳೂರು ನಗರದಲ್ಲಿ 06, ಕಲಬುರಗಿಯಲ್ಲಿ ಮೂವರು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 04, ಧಾರವಾಡದಲ್ಲಿ 02, ತುಮಕೂರಿನಲ್ಲಿ 08, ಚಿಕ್ಕಬಳ್ಳಾಪುರದಲ್ಲಿ 45, ಮಂಡ್ಯದಲ್ಲಿ 03, ಬಾಗಲಕೋಟೆಯಲ್ಲಿ 01, ಚಿಕ್ಕಮಗಳೂರಿನಲ್ಲಿ 05, ಚಿತ್ರದುರ್ಗ 01, ದಾವಣಗೆರೆ 03, ಬೆಂಗಳೂರು ನಗರ 05, ವಿಜಯಪುರ 02, ಬೀದರ್ 06, ಬೆಳಗಾವಿ 01, ಹಾವೇರಿ 03, ಉತ್ತರ ಕನ್ನಡ 01, ದಕ್ಷಿಣ ಕನ್ನಡ 01 ಮತ್ತು ಹಾಸನದಲ್ಲಿ 14 ಕೊರೊನಾ ವೈರಸ್ ಸೋಂಕುಪ್ರಕರಣಗಳು ವರದಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.