ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮುತ್ಸದ್ಧಿ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಹೇಳಿದ್ದಾರೆ.
ಶುಕ್ರವಾರ ಮುಸ್ಲಿಮ್ ಮುಖಂಡರ ಸಭೆ ಕರೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ್ದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಯನಗರ ಶಾಸಕಿ ಸೌಮ್ಯ ರೆಡ್ಡಿ, 'ನಾನು ಬಿಎಸ್ವೈ ಅವರನ್ನು ಇಷ್ಟಪಡುವುದಕ್ಕೆ ಇದೊಂದು ಕಾರಣವಾಗಿವೆ. ಒಂದು ಕಡೆ ರಾಜಕಾರಣಿಗಳ ಉಡುಪಿನಲ್ಲಿ ಧರ್ಮಾಂಧರಿದ್ದರೆ, ಇನ್ನೊಂದು ಕಡೆ ಅದೇ ಪಕ್ಷದಲ್ಲಿ ಈ ರಾಜಕಾರಣಿ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ನಾವು ಈ ಹೋರಾಟದಲ್ಲಿ ನಿಮಗೆ(ಬಿಎಸ್ವೈ) ಬೆಂಬಲವಾಗಿರುತ್ತೇವೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.