ADVERTISEMENT

ಕೋವಿಡ್ ಭೀತಿ: ಶವ ಸಂಸ್ಕಾರಕ್ಕೆ ಬಾರದ ಬಂಧುಗಳು!

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 14:01 IST
Last Updated 17 ಜುಲೈ 2020, 14:01 IST
ಅಥಣಿಯಲ್ಲಿ ತಳ್ಳು ಗಾಡಿಯಲ್ಲಿ ಶವ ಸಾಗಿಸಿದ ದೃಶ್ಯ
ಅಥಣಿಯಲ್ಲಿ ತಳ್ಳು ಗಾಡಿಯಲ್ಲಿ ಶವ ಸಾಗಿಸಿದ ದೃಶ್ಯ   

ಅಥಣಿ (ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಮೃತರಾದ ವ್ಯಕ್ತಿಯೊಬ್ಬರ ಅಂತಿಮಯಾತ್ರೆಗೆ ಸಂಬಂಧಿಕರು, ಆಪ್ತರು ಅಥವಾ ಸ್ಥಳೀಯರು ಬಾರದೆ ಕುಟುಂಬವೊಂದು ತಳ್ಳುವ ಗಾಡಿಯಲ್ಲಿ ಶವ ಸಾಗಿಸಿದ ಘಟನೆ ಗುರುವಾರ ನಡೆದಿದೆ. ಕೊರೊನಾ ಭೀತಿಯಿಂದಾಗಿ ಜನರು ನೆರವಿಗೆ ಧಾವಿಸಿಲ್ಲ ಎನ್ನಲಾಗುತ್ತಿದೆ.

ಇಲ್ಲಿನ ನಿವಾಸಿ ಸದಾಶಿವ ಹಿರಟ್ಟಿ(55) ಮೃತರು. ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದರು. ಅನಾರೋಗ್ಯದಿಂದ ಗುರುವಾರ ತಡರಾತ್ರಿ ಮನೆಯಲ್ಲಿ ಮಲಗಿದಲ್ಲೇ ಮೃತರಾಗಿದ್ದರು. ಅಂತಿಮಯಾತ್ರೆಗೆ ಹೆಗಲು ಕೊಡಲು ಸ್ಥಳೀಯರು ಮುಂದೆ ಬಂದಿಲ್ಲ. ಬಂಧುಗಳಾರೂ ಬಾರದಿದ್ದರಿಂದ ಕುಟುಂಬದ ಕೆಲವರೇ ಪಟ್ಟಣದ ಹೊರವಲಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಗ ತಳ್ಳುಗಾಡಿಯಲ್ಲಿ ಶವ ಸಾಗಿಸುತ್ತಿದ್ದರೆ, ಮೃತರ ಪತ್ನಿ ಜೊತೆಯಲ್ಲಿ ತೆರಳಿದ್ದಾರೆ. ಸ್ಥಳೀಯರು ಮಾಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.

ವಿಡಿಯೊ ಮಾಡುತ್ತಿರುವ ಕೆಲವರು ನೆರವಿಗೆ ಬಂದಿಲ್ಲದಿರುವ ದೃಶ್ಯಗಳು ಕೂಡ ವಿಡಿಯೊದಲ್ಲಿದೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.