ADVERTISEMENT

ಕನ್ನಡ ಭವನದಲ್ಲಿ ಸಂಸ್ಕೃತಿ ಸಚಿವ ಬಿ. ಸುನೀಲ್‌ಕುಮಾರ್ ಕಚೇರಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 19:13 IST
Last Updated 17 ಸೆಪ್ಟೆಂಬರ್ 2021, 19:13 IST
   

ಬೆಂಗಳೂರು: ಕಲಾವಿದರ ಕುಂದು ಕೊರತೆಗಳನ್ನು ವಿಚಾರಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಬಿ. ಸುನೀಲ್‌ಕುಮಾರ್ ತಿಂಗಳಲ್ಲಿ ಒಂದು ದಿನ ಕನ್ನಡ ಭವನದಲ್ಲಿ ಲಭ್ಯವಾಗಲಿದ್ದಾರೆ.

ಕನ್ನಡ ಭವನದ ಮೊದಲ ಮಹಡಿಯಲ್ಲಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಇನ್ನು ಮುಂದೆ ನಿಯಮಿತ ದಿನಗಳಲ್ಲಿ ಕಲಾವಿದರು ನನ್ನನ್ನು ಇಲ್ಲಿ ಭೇಟಿಯಾಗಬಹುದು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ
ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.