ADVERTISEMENT

ಬಿಜೆಪಿ, ಎಎಪಿಗೆ ಅಭಿನಂದನೆ: ವ್ಯವಸ್ಥೆ ಬದಲಾಗಬೇಕು ಎಂದ ಟಬು ರಾವ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮಾರ್ಚ್ 2022, 3:30 IST
Last Updated 11 ಮಾರ್ಚ್ 2022, 3:30 IST
ದಿನೇಶ್ ಗುಂಡೂರಾವ್ ಹಾಗೂ ಟಬು ರಾವ್
ದಿನೇಶ್ ಗುಂಡೂರಾವ್ ಹಾಗೂ ಟಬು ರಾವ್   

ಬೆಂಗಳೂರು: ವ್ಯವಸ್ಥೆ ಬದಲಾಗದ ಹೊರತು ಏನು ಮಾಡಲು ಆಗುವುದಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಹೇಳಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಕುರಿತು ಟ್ವೀಟ್ ಮಾಡಿರುವ ಅವರು ಬಿಜೆಪಿ, ಎಎಪಿ, ಕಾಂಗ್ರೆಸ್ ಪಕ್ಷದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿ ಮತ್ತೊಮ್ಮೆ ಎಲ್ಲವನ್ನು ಧೂಳಿಪಟ ಮಾಡಿದೆ. ಆದರೆ, ‘ಆಮ್‌ ಆದ್ಮಿ’ಪಕ್ಷ ಅಸಾಧಾರಣ ಗೆಲುವು ಸಾಧಿಸಿದ್ದು, ನಿಜಕ್ಕೂ ಅರವಿಂದ ಕೇಜ್ರಿವಾಲ್‌ ಅವರು ಸಮರ್ಥ ನಾಯಕರಾಗಿ ಹೊರಹೊಮ್ಮಿದ್ದಾರೆ. ವ್ಯವಸ್ಥೆ ಬದಲಾಗದೇ ಜನರೂ ಎಷ್ಟೇ ಕಷ್ಟ ಪಟ್ಟರೂ ಯಾವುದೇ ಪ್ರಯೋಜನವಿಲ್ಲ. ವ್ಯವಸ್ಥೆ ಬದಲಾಗದ ಹೊರತು ಏನನ್ನು ಮಾಡಲಾಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಟಬು ರಾವ್ ಅವರು ಕಾಂಗ್ರೆಸ್‌ ಕುರಿತಾಗಿ ಟ್ವೀಟ್ ಮಾಡಿರಬಹುದು ಎಂದು ಹೇಳಲಾಗುತ್ತಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.