ADVERTISEMENT

ಪ್ಯಾಂಟ್ ಬಿಚ್ಚು ಎಂದು ನಾವು ಹೇಳಿದ್ದೆವಾ: ಡಿಕೆಶಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 21:37 IST
Last Updated 25 ಜನವರಿ 2023, 21:37 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌    

ಬೆಂಗಳೂರು: ‘ರಮೇಶ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚು ಎಂದು ನಾವು ಹೇಳಿದ್ದೆವಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

‘ನನ್ನ ಜೀವನ ಹಾಳು ಮಾಡಿದ್ದು ಡಿ.ಕೆ. ಶಿವಕುಮಾರ್‌’ ಎಂಬ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಲಂಚ ಹೊಡಿ ಎಂದು ನಾವು ಹೇಳಿದ್ದೆವಾ? ದುಡ್ಡು ಹಂಚು ಎಂದಿದ್ದೆವಾ’ ಎಂದೂ ಕೇಳಿದರು.

‘ಕಾಂಗ್ರೆಸ್‌ ಅನ್ನು ಹಾಳು‌ ಮಾಡಿದ್ದು ಅವನು‌. ‘ಆಪರೇಷನ್ ಕಮಲ‌’ ಮಾಡಿದ್ದು ಅವನು. ಸರ್ಕಾರ ಬೀಳಿಸಿದ್ದು ಅವನು’ ಎಂದು ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.