ADVERTISEMENT

ಡಿಕೆಶಿ ಆಪ್ತ ಸಚಿನ್‌ ನಾರಾಯಣ್‌ಗೂ ‘ಸುಪ್ರೀಂ’ ಅಭಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:00 IST
Last Updated 17 ಅಕ್ಟೋಬರ್ 2019, 20:00 IST
   

ನವದೆಹಲಿ: ಡಿ.ಕೆ.ಶಿವಕುಮಾರ್‌ ಅವರ ಆಪ್ತ ಸಚಿನ್‌ ನಾರಾಯಣ್‌ ಅವರನ್ನು ಬಂಧಿಸಕೂಡದು ಎಂದು ಇ.ಡಿ.ಗೆ ಸೂಚಿಸಿ ಸುಪ್ರೀಂ ಕೋರ್ಟ್‌ ಗುರುವಾರ ಮಧ್ಯಂತರ ಆದೇಶ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಇ.ಡಿ. ಸಮನ್ಸ್ ರದ್ದತಿ ಕೋರಿ ಇವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್ ನೇತೃತ್ವದ ಪೀಠ, ಇವರನ್ನು ಬಲವಂತದಿಂದ ಬಂಧಿಸಕೂಡದು ಎಂದು ತಿಳಿಸಿದೆ.

ಶಿವಕುಮಾರ್‌ ಅವರ ಇತರ ಆಪ್ತರಾದ ಆಂಜನೇಯ ಹನುಮಂತಪ್ಪ ಹಾಗೂ ಎನ್‌.ರಾಜೇಂದ್ರ ಅವರನ್ನೂ ಬಂಧಿಸದಂತೆ ಪೀಠ ಕಳೆದ ಮಂಗಳವಾರ ಆದೇಶಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.