ಹುಬ್ಬಳ್ಳಿ: ಅನುಕಂಪದ ಆಧಾರದ ಮೇಲಿನ ನೌಕರಿಗಾಗಿ ಹತ್ತಾರು ವರ್ಷಗಳಿಂದ ಕಾಯುತ್ತಿದ್ದ 180 ಜನರನ್ನು, ಬಸ್ ತ್ವರಿತ ಸಾರಿಗೆ ಸೇವೆಯ (ಬಿಆರ್ಟಿಎಸ್) ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಇದರಲ್ಲಿ ಎಂಜಿನಿಯರಿಂಗ್, ಎಂಬಿಎ ಮತ್ತು ಸ್ನಾತಕೋತ್ತರ ಪದವೀಧರರೂ ಇದ್ದಾರೆ.
‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಚಾಲಕರು, ನಿರ್ವಾಹಕರು ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದರು. ಅವರ ಅವಲಂಭಿತರು ಅನುಕಂಪದ ನೌಕರಿಗೆ ಕಾಯುತ್ತಿದ್ದರು’ ಎಂದು ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.