ADVERTISEMENT

ವಿಜಯಪುರ: ಭೀಮಾ ನದಿಗೆ ಹಾರಿ ತಂದೆ ಮಗ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಮೇ 2020, 15:46 IST
Last Updated 16 ಮೇ 2020, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಜಿಲ್ಲೆಯ ಗಡಿ ಭಾಗವಾದ ಧೂಳಖೇಡ ಸಮೀಪ ಭೀಮಾ ನದಿ ಸೇತುವೆ ಮೇಲಿನಿಂದ ಹಾರಿ ತಂದೆ, ಮಗ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೊಲ್ಲಾಪುರ ನಗರದ ಭವಾನಿ ಪೇಠ್‌ ನಿವಾಸಿ ನಾಗರಾಜ ಸಿದ್ರಾಮಪ್ಪ ಕನಾಳೆ (47) ಹಾಗೂ ಪುತ್ರ ಸಮರ್ಥ ಕನಾಳೆ(5) ಎಂಬುವವರು ಸಾವನ್ನಪ್ಪಿದ್ದಾರೆ ಎಂದು ಝಳಕಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಂದೆಯ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ನಾಗರಾಜ ತನ್ನ ಮಗನೊಂದಿಗೆ ಶುಕ್ರವಾರ ಮನೆಬಿಟ್ಟು ಬಂದಿದ್ದ. ಈ ಕುರಿತು ಸೊಲ್ಲಾಪುರ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.