ADVERTISEMENT

ಹಲ್ಲೆಗೈದು ಪರಾರಿಗೆ ಯತ್ನಿಸಿದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 4:53 IST
Last Updated 18 ನವೆಂಬರ್ 2018, 4:53 IST
ರೌಡಿ ಶೀಟರ್ ಪ್ರದೀಪ್ ಅಲಿಯಾಸ್ ಸೆವೆನ್ ಸ್ಟಾರ್ ಪ್ರದೀಪ್
ರೌಡಿ ಶೀಟರ್ ಪ್ರದೀಪ್ ಅಲಿಯಾಸ್ ಸೆವೆನ್ ಸ್ಟಾರ್ ಪ್ರದೀಪ್   

ಕಲಬುರ್ಗಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದರೌಡಿ ಶೀಟರ್‌ಪ್ರದೀಪ್ ಅಲಿಯಾಸ್ ಸೆವೆನ್ ಸ್ಟಾರ್ ಪ್ರದೀಪ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಈಚೆಗೆ ಈತ ಆರ್.ಜಿ.ನಗರ ಠಾಣೆ ಪಿಎಸ್ಐ ಮತ್ತು ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಖಚಿತ ಮಾಹಿತಿ ಆಧರಿಸಿ ಬಂಧಿಸಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಆತ್ಮ ರಕ್ಷಣೆಗಾಗಿ ಅಶೋಕ ನಗರ ಠಾಣೆ ಪಿಎಸ್ಐ ರಮೇಶ್‌ ಅವರು ಪ್ರದೀಪ್‌ನ ಎರಡೂ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಾಳು ಪ್ರದೀಪ್‌ನನ್ನುಜಿಲ್ಲಾಸ್ಪತ್ರೆಗೆ ಹಾಗೂ ಕಾನ್‌ಸ್ಟೆಬಲ್‌ಗಳಾದ ತೌಸಿಫ್, ವೆಂಕಟೇಶ್‌, ಬಸವರಾಜು ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT
ಗಾಯಗೊಂಡಿರುವ ಪೊಲೀಸ್‌ ಸಿಬ್ಬಂದಿ

ಅಪಹರಣ, ದೊಂಬಿ, ಗಲಭೆ, ಕೊಲೆ ಯತ್ನ ಸೇರಿದಂತೆ ಪ್ರದೀಪ್ ಮೇಲೆ 23 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.