ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕು ಒಂದರಲ್ಲೇ ಮೂವರಿಗೆ ಕೋವಿಡ್ 19 ದೃಢವಾಗಿದೆ.
ಈ ಮೂವರು ದೆಹಲಿ ಮೂಲದ ಧರ್ಮಗುರುಗಳ ಸಂಪರ್ಕಕ್ಕೆ ಬಂದಿದ್ದದ್ದರು. ಮಾರ್ಚ್ 23ರಿಂದ 29ರವರೆಗೆ 10 ಮಂದಿ ಧರ್ಮಗುರುಗಳು ಮಳವಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. 10 ಮಂದಿಯಲ್ಲಿ ಐವರಿಗೆ ಈಗಾಗಲೇ ಕೋವಿಡ್ 19 ದೃಢಪಟ್ಟಿದೆ.
ಧರ್ಮಗುರುಗಳ ಸಂಪರ್ಕಕ್ಕೆ ಬಂದಿದ್ದ 49 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಕೊರೊನಾ ಸೋಂಕಿನ ಲಕ್ಷಣ ಇರುವ 13 ಮಂದಿಯ ಗಂಟಲು ದ್ರವ, ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸರ್ಕಾರ ಫಲಿತಾಂಶ ಪ್ರಕಟಿಸಿದ್ದು ಮೂವರಲ್ಲಿ ಕೋವಿಡ್ 19 ದೃಢಪಟ್ಟಿದೆ.
ಇನ್ನೂ 10 ಮಂದಿಯ ಫಲಿತಾಂಶ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.