ADVERTISEMENT

ಐದು ಜಿಲ್ಲೆಗಳ ಎಸ್ಪಿ ಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 18:49 IST
Last Updated 7 ಜೂನ್ 2019, 18:49 IST

ಬೆಂಗಳೂರು: ಐದು ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು ಸೇರಿ ಒಟ್ಟು ಒಂಭತ್ತು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಅಣ್ಣಾಮಲೈ ರಾಜೀನಾಮೆಯಿಂದ ತೆರವಾಗಿರುವ ಬೆಂಗಳೂರು ನಗರ ದಕ್ಷಿಣ ವಿಭಾಗದ ಡಿಸಿಪಿ ಹುದ್ದೆಗೆ ಡಾ. ರೋಹಿಣಿ ಕಟೋಚ್‌ ಸೆಪಟ್‌ ಅವರನ್ನು ವರ್ಗಾಯಿಸಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳು: ಡಾ.ಚೇತನ್‌ ಸಿಂಗ್ ರಾಥೋಡ್– ರಾಮನಗರ ಎಸ್ಪಿ, ಬಿ.ರಮೇಶ್‌– ಬಿಡಿಎ ವಿಶೇಷ ಕಾರ್ಯಪಡೆ ಎಸ್ಪಿ, ಕಾರ್ತಿಕ್‌ ರೆಡ್ಡಿ– ಕೋಲಾರ ಜಿಲ್ಲೆ ಎಸ್ಪಿ, ಧರ್ಮೇಂದ್ರ ಕುಮಾರ್‌ ಮೀನಾ– ಬೆಂಗಳೂರು ನಿಸ್ತಂತು ವಿಭಾಗದ ಎಸ್ಪಿ, ಡಿ. ಕಿಶೋರ್‌ ಬಾಬು– ಆಂತರಿಕ ಭದ್ರತಾ ವಿಭಾಗದ ಎಸ್ಪಿ, ಡಾ.ಸಿ.ಬಿ.ವೇದಮೂರ್ತಿ– ರಾಯಚೂರು ಎಸ್ಪಿ, ಡಾ.ಎ.ಎನ್‌.ಪ್ರಕಾಶ್‌ ಗೌಡ– ಹಾಸನ ಎಸ್ಪಿ, ಎಚ್‌.ಡಿ.ಆನಂದ ಕುಮಾರ್‌– ಚಾಮರಾಜನಗರ ಎಸ್ಪಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.