ಬೆಂಗಳೂರು: ಬ್ಯಾಂಕ್ ಖಾತೆಗಳನ್ನು ಗುರಿಯಾಗಿಸಿ ವಂಚನೆ ಮಾಡುತ್ತಿದ್ದ ಕೇರಳದ ಇಬ್ಬರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ರಾಘವ್ ಲಾಲ್ ಹಾಗೂ ಪಿಳ್ಳೈ ಬಂಧಿತರು. ₹ 5 ಕೋಟಿಗೂ ಅಧಿಕ ಸಾಲ ಪಡೆದು ಸಾಲ ತೀರಿಸದೇ ಎನ್ಪಿಎ ಪಟ್ಟಿಯಲ್ಲಿದ್ದವರನ್ನು ಪತ್ತೆ ಮಾಡುತ್ತಿದ್ದ ಆರೋಪಿಗಳು ಬ್ಯಾಂಕ್ ಗ್ರಾಹಕರಿಗೆ ಕರೆ ಮಾಡಿ, ‘ಕಡಿಮೆ ಹಣಕ್ಕೆ ಬ್ಯಾಂಕ್ ವ್ಯವಹಾರ ಪೂರ್ಣಗೊಳಿಸುತ್ತೇವೆ’ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದರು. ಸತೀಶ್ ಎಂಬುವರಿಗೆ ಆರೋಪಿಗಳು ₹ 82 ಲಕ್ಷ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.